Friday, 26 June 2015

ನಮ್ಮೊಡನಿದ್ದ ಕರ್ನಾಟಕದ ಯೋಗಸಾಧಕರು

ನಮ್ಮೊಡನಿದ್ದ ಕರ್ನಾಟಕದ ಯೋಗಸಾಧಕರು

- ಮೊಳಹಳ್ಳಿ ಅನಿಲ್ಕುಮಾರ್

 ಯೋಗವಿದ್ಯೆಯು ವಿಶ್ವಕ್ಕೆ ಭಾರತ ನೀಡಿರುವ ಒಂದು ಮಹಾಕೊಡುಗೆ. ಇದನ್ನು ವಿಶ್ವವ್ಯಾಪಿಯಾಗಿಸಿ ರುವುದರಲ್ಲಿ ಕನ್ನಡನಾಡಿನ ಯೋಗಿಗಳ ಕೊಡುಗೆಯೂ ಅನ್ಯನ್ಯ. ಪ್ರಥಮ ಅಂತರರಾಷ್ಟ್ರೀಯ ಯೋಗದಿನಾಚರಣೆಯ ಸಂದರ್ಭದಲ್ಲಿ ಅಂತಹ ಯೋಗಿಗಳ ಪರಿಚಯ (ಸಂಕ್ಷಿಪ್ತ) ಮಾಡಿಕೊಳ್ಳುವುದು ಪ್ರಸ್ತುತವೇ ಆಗಿದೆ.


ಶ್ರೀ ಕೃಷ್ಣ ಪಟ್ಟಾಭಿ ಜೋಯಿಸ್ (26-7-1915  - 18-5-2009) :
 ತಮ್ಮ 12ನೇ ವಯಸ್ಸಿನಲ್ಲಿಯೇ ಯೋಗದೆಡೆಗೆ ಆಕರ್ಷಿತರಾಗಿ ಹಾಸನದಿಂದ ಮೈಸೂರಿಗೆ ಬಂದು ಪಟ್ಟಾಭಿ ಜೋಯಿಸರು ಟಿ. ಕೃಷ್ಣಮಾಚಾರ್ಯರ (ಬಿ.ಕೆ.ಎಸ್ಅಯ್ಯಂಗಾರ್ ಅವರಿಗೂ ಗುರುಗಳು) ಬಳಿ ಯೋಗಾಭ್ಯಾಸ ಪ್ರಾರಂಭಿಸಿದರು. ಇವರ ಯೋಗಪ್ರವೀಣತೆಯನ್ನು ಗಮನಿಸಿದ ಆಗಿನ ಮೈಸೂರಿನ ಒಡೆಯರು ಮೈಸೂರಿನ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಯೋಗವಿಭಾಗವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ನೀಡುವಂತೆ ವ್ಯವಸ್ಥೆ ಮಾಡಿದರು.

     
     ಪಟ್ಟಾಭಿಯವರ ಯೋಗಪ್ರದರ್ಶನದಿಂದ ಆಕರ್ಷಿತರಾಗಿ ಅವರನ್ನು ವರಿಸಿದ ಸಾವಿತ್ರಮ್ಮ ನವರೇ ಇವರ ಮೊದಲ ಯೋಗಶಿಷ್ಯೆ. 5 ಮಂದಿಯ ಕುಟುಂಬಕ್ಕೆ ಆಧಾರ ಸಂಸ್ಕೃತ ವಿಶ್ವವಿದ್ಯಾಲಯ ದಲ್ಲಿ ದೊರೆಯುತ್ತಿದ್ದ 5 ರೂ. ಸಂಭಾವನೆ. ಇದೇ ಅವರ ಜೀವನಾಧಾರ. ಆದರೆ ಸತತ ಯೋಗದ ಕುರಿತೇ ಅವರ ಧ್ಯಾನ.

 1948ರಲ್ಲಿ ಮೈಸೂರಿನ ಲಕ್ಷ್ಮೀಪುರಂನ ಒಂದು ಚಿಕ್ಕ 2 ರೋಮಿನ ಕೊಠಡಿಯಲ್ಲಿ ಯೋಗದಲ್ಲಿನ ಚಿಕಿತ್ಸಾಗುಣಗಳ ಬಗೆಗೆ ಸಂಶೋಧನೆ ನಡೆಸಲು ಅಷ್ಟಾಂಗಯೋಗ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತ ಯೋಗ ಕುರುಂಟ(Yoga Korunta) ಆಧಾರದ ಅಷ್ಟಾಂಗ ವಿನ್ಯಾಸ ಯೋಗವನ್ನು ಪ್ರಚುರಪಡಿಸಿದರುವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಂದ ಹಿಡಿದು ಕಾನ್ಸ್ಟೇಬಲ್ವರೆಗೆ ಹಾಗೂ ಡಾಕ್ಟರ್ಗಳು ಸೇರಿದಂತೆ ಸಮಾಜದ ಗಣ್ಯರು ಇವರಲ್ಲಿಗೆ ಯೋಗಾಭ್ಯಾಸಕ್ಕಾಗಿ ಬರುತ್ತಿದ್ದರು. ಅನೇಕ ಸ್ಥಳೀಯ ವೈದ್ಯರು ಡಯಾಬಿಟಿಸ್, ಹೃದಯ ಹಾಗೂ ರಕ್ತದೊತ್ತಡ ಮುಂತಾದ ಕಾಯಿಲೆಯ ರೋಗಿಗಳ ಆರೋಗ್ಯ ಸುಧಾರಣೆಗಾಗಿ ಇವರನ್ನು ಸೂಚಿಸುತ್ತಿದ್ದರು.
ಇವೆಲ್ಲದರ ಜೊತೆಗೆ ಭಾರತದಾದ್ಯಂತ ಪ್ರವಾಸ ಕೈಗೊಂಡ ಅವರು ದೇಶದ ಅನೇಕ ಯೋಗಿಗಳನ್ನು ವಿದ್ವಾಂಸರನ್ನು ಬೇಟಿಮಾಡಿ ಅವರೊಂದಿಗೆ ಯೋಗದ ಕುರಿತು ಚರ್ಚೆ-ಸಂವಾದಗಳನ್ನು ನಡೆಸಿದರು. ಜೊತೆಗೆ ಅಲ್ಲೆಲ್ಲ ಯೋಗ ಪ್ರದರ್ಶನಗಳನ್ನೂ ಏರ್ಪಡಿಸಿದರು. ಯೋಗ ಸಂಶೋಧನೆಯಲ್ಲಿ ಖ್ಯಾತರಾದ ಸ್ವಾಮಿ ಶಿವಾನಂದ, ಕಾಂಚಿಪುರಂನ ಶಂಕರಾಚಾರ್ಯ, ಸ್ವಾಮಿ ಕಲ್ಯಾನಂದ, ಸ್ವಾಮಿ ಗೀತಾನಂದ ಮುಂತಾದವರು ಇವರ ಸಂಪರ್ಕಕ್ಕೆ ಬಂದರು.
   ಸ್ವಾಮಿ ಪೂರ್ಣಾನಂದರ ಸೂಚನೆಯಂತೆ ಯೋಗ ಶಿಕ್ಷಣಕ್ಕಾಗಿ ಬೆಲ್ಜಿಯಂನ Andre Van Lysebth (ಆಂಡ್ರೆ ವನ್ ಲೆಸ್ಬೆತ್) ಅವರು 2 ತಿಂಗಳ ಕಾಲ ಪಟ್ಟಾಭಿಯವರ ಜೊತೆಗಿದ್ದು ಅಷ್ಟಾಂಗ ವಿನ್ಯಾಸ ಯೋಗ ಪದ್ಧತಿಗಳನ್ನು ಬಗೆಗೆ ಅಭ್ಯಸಿಸಿ ಅಷ್ಟಾಂಗಯೋಗದ ಕುರಿತು Yoga Self Taught’ ಎಂಬ ಪುಸ್ತಕ ರಚಿಸಿದರು. ಇದು ಪಟಾಭಿಯವರನ್ನು ಯೂರೋಪ್ ಸೇರಿದಂತೆ ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿತು. ಯೋಗದೆಡೆಗೆ ಆಕರ್ಷಿತರಾದ ಅನೇಕ ಪಾಶ್ಚಾತ್ಯಯೋಗಪ್ರೇಮಿಗಳು ಯೋಗಾಭ್ಯಾಸಕ್ಕಾಗಿ ಮೈಸೂರಿಗೆ ಬರತೊಡಗಿದರು.
 1973ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ನಿವೃತ್ತರಾದ ನಂತರ ಬೇರೆಬೇರೆ ದೇಶಗಳ ಯೋಗಾಸಕ್ತರು ಇವರನ್ನು ಆಹ್ವಾನಿಸಿದರು. ಅಮೆರಿಕ, ಬ್ರೆಜಿಲ್, ಕ್ಯಾಲಿಫೋರ್ನಿಯಾ, ಫ್ರಾನ್ಸ್, ಸಿಜರ್ಲೆಂಡ್, ಫಿನ್ಲ್ಯಾಂಡ್, ನಾರ್ವೆ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೂ ಪ್ರವಾಸ ಕೈಗೊಂಡು ಅಲ್ಲಿ ಯೋಗತರಗತಿಗಳನ್ನು ನಡೆಸಿದರು. ಎಲ್ಲ ಕಾರ್ಯಸರಣಿಯಿಂದ ೨೦ ವರ್ಷಗಳಲ್ಲಿ ಪಟ್ಟಾಭಿ ಜೋಯಿಸ್ ಹಾಗೂ ಅವರ ಅಷ್ಟಾಂಗ ವಿನ್ಯಾಸ ಯೋಗ ಜಗತ್ಪ್ರಸಿದ್ಧವಾಯಿತು. ಮೈಸೂರಿಗೆ ಬರುವ ವಿದೇಶಿಯರ ಸಂಖ್ಯೆ ವೃದ್ದಿಸಿದಂತೆ ಆಯಾ ದೇಶಗಳಲ್ಲೂ ಅಷ್ಟಾಂಗ ವಿನ್ಯಾಸ ಯೋಗ ಕೇಂದ್ರಗಳನ್ನೂ ಪ್ರಾರಂಭಿಸಿದರು. ಇಂದು ಆಫ್ರಿಕ, ಏಷ್ಯಾ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಪಟ್ಟಾಭಿಯವರ ಅಷ್ಟಾಂಗವಿನ್ಯಾಸ ಯೋಗಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಏಳು ದಶಕಗಳ ಯೋಗ ಸಾಧನೆ-ಯೋಗಪ್ರಸಾರದ ತಪಸ್ವಿ ತನ್ನ 93 ವರ್ಷ ವಯಸ್ಸಿನಲ್ಲಿ (2009) ಇಹಲೋಕ ತ್ಯಜಿಸಿದರು. ಆದರೆ ಬದ್ಧತೆ, ಸ್ಥಿರತೆ, ಸಮಗ್ರತೆಯನ್ನು ಯೋಗಶಿಕ್ಷಾರ್ಥಿಗಳಲ್ಲಿ ಮೂಡಿಸಲು ಅವರು ಅಡಿಗಲ್ಲಿಟ್ಟ ಸಂಸ್ಥೆಗಳು ಇಂದಿಗೂ ಕಾರ್ಯನಿರತವಾಗಿವೆ.

ಬಿ.ಕೆ.ಎಸ್. ಅಯ್ಯಂಗಾರ್ (14-12-1918 20-8-2014) :
1988ರಲ್ಲಿ ಅಮೆರಿಕ ಸಂಸ್ಥಾನದ ನಕ್ಷತ್ರಗಳನ್ನು ಹೆಸರಿಸುವ ಸಚಿವಾಲಯವು (The Ministry of Fed. Star Registration- USA) ಉತ್ತರಾರ್ಧಗೋಲಾರ್ಧದ ಒಂದು ನಕ್ಷತ್ರವನ್ನುಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ಎಂದು ಗುರುತಿಸಿ ದಾಖಲಿಸಿದೆ; 2004 ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ ಜಗತ್ತಿನ 100 ಮಂದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಒಬ್ಬರು; ಚೀನಾದ ಬೀಜಿಂಗ್ ಅಂಚೆ ಕಾರ್ಯಾಲಯ ಅಯ್ಯಂಗಾರ್ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಗೌರವಗಳಿಗೆಲ್ಲ, ರಾಜಮರ್ಯಾದೆಗಳಿಗೆಲ್ಲ ಬಿ.ಕೆ.ಎಸ್. ಅಯ್ಯಂಗಾರ್ ಅವರು ಪಾತ್ರವಾದದ್ದು ಅವರ ಯೋಗ ಎಂಬ ತಪಸ್ಸಿನಿಂದ.

         ಇಂದು ಯೋಗಕ್ಕೆ ಪರ್ಯಾಯ ಪದ ಎಂಬಂತೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಹೆಸರು ಬೆಳೆದುನಿಂತಿದೆ. ಜಗತ್ತು ಇಂದು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯ ಯೋಗಕ್ಕೆ ಮಾನ್ಯತೆ ಕೊಡುತ್ತಿದೆ ಎಂದರೆ ಅದರ ಹಿಂದೆ ಯೋಗರ್ಷಿ ಅಯ್ಯಂಗಾರ್ ಅವರ ಕೊಡುಗೆ ಅನನ್ಯವಾದದ್ದು ಮತ್ತು ಮಹತ್ವದ್ದು. ಹಿನ್ನೆಲೆಯಲ್ಲಿಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದು - ಮುಂದಿನ ಹಲವು ಶತಮಾನಗಳವರೆಗೆ ಬಿ.ಕೆ.ಎಸ್. ಅಯ್ಯಂಗಾರ್ ಅವರು ಜಗತ್ತಿನಾದ್ಯಂತ ಜನರ ಜೀವನದಲ್ಲಿ ಯೋಗದ ಬೆಳಕನ್ನು ಹಚ್ಚಿದ ಒಬ್ಬ ಅತಿಶ್ರೇಷ್ಠ ಗುರುವಾಗಿ, ವಿದ್ವಾಂಸರಾಗಿ ಮತ್ತು ನಿಷ್ಠಾವಂತ ಯೋಗಿಯಾಗಿ ನೆನೆಯಲ್ಪಡುತ್ತಾರೆ- ಎಂದು.
       ಒಬ್ಬ ಬಡ ಹಳ್ಳಿಮೇಷ್ಟ್ರರಾದ ಕೃಷ್ಣಮಾಚಾರ್ ಹಾಗೂ ಶೇಷಮ್ಮ ದಂಪತಿಗಳ 13 ಜನ ಮಕ್ಕಳಲ್ಲಿ 11ನೇ ಯವರಾಗಿ ಜನಿಸಿದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಕರ್ನಾಟಕದವರು. ಬಾಲ್ಯದಲ್ಲಿ ಅವರನ್ನು ಅನಾರೋಗ್ಯ ಬಾಧಿಸಿತು. ಮಲೇರಿಯಾ ಹಾಗೂ ಕ್ಷಯರೋಗ ಅವರನ್ನು ಕಾಡಿತು. ಆಮೇಲೆ ಅವರ ಭಾವಮೈದುನ ಟಿ. ಕೃಷ್ಣಮಾಚಾರ್ಯ ಯೋಗ ಮಾಡುವಂತೆ ಅವರನ್ನು ಪ್ರೇರೇಪಿಸಿದರು. ‘ಆಧುನಿಕ ಯೋಗದ ಪಿತಾಮಹ ಎಂದೇ ಪರಿಗಣಿತರಾಗಿದ್ದ ಕೃಷ್ಣಮಾಚಾರ್ಯ ಅವರ ಮಾತನ್ನು ಬಿ.ಕೆ.ಎಸ್. ಅಯ್ಯಂಗಾರರು ತೆಗೆದುಹಾಕಲಿಲ್ಲ. ಅವರ ಮಾರ್ಗದರ್ಶನದಲ್ಲಿ ಯೋಗಾಸನ ಕಲಿತರು.
        ಕೆಲಕಾಲ ಧಾರವಾಡ ಮತ್ತು ಬೆಳಗಾವಿ ಯೋಗತರಗತಿಗಳನ್ನು ನಡೆಸಿದ ಅವರು ಅನಂತರ ಪುಣೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಸ್ಥಳೀಯರಿಂದ ಬಹಳಷ್ಟು ತೊಂದರೆಗಳನ್ನನುಭವಿಸಿದರೂ ತಮ್ಮ ಡೆಕ್ಕನ್ ಜಿಮ್ಖಾನಾದಲ್ಲಿ ದೃಢವಾಗಿ ನಿಂತು ಛಲವಾದಿಯಂತೆ ಯೋಗವಿದ್ಯೆಯನ್ನು ಮುಂದುವರಿಸಿದರು. ಅಲ್ಲಿಯೇ ಜೀವನದ ಆಕಸ್ಮಿಕ ತಿರುವಿನಂತೆ ನೆಹರು ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದ ವಯೋಲಿನ್ ವಾದಕ ಯಹೂದಿ ಮೆನುಹಿನ್ ಭೇಟಿ ಪರಿಚಯ. ಅಯ್ಯಂಗಾರ್ ಯೋಗ ಶಿಕ್ಷಣ ವಿಧಾನಕ್ಕೆ ಮಾರುಹೋದ ಆತ ಲಂಡನ್, ಪ್ಯಾರಿಸ್ಗಳಲ್ಲಿ ಅಯ್ಯಂಗಾರ್ ಅವರ ಯೋಗಶಿಕ್ಷಣ ತರಗತಿ, ಪ್ರದರ್ಶನ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದನು. ಮೂಲಕ ಅಯ್ಯಂಗಾರ್ರು ಹೊರಜಗತ್ತಿಗೆ ಪರಿಚಯವಾದರು.
       ವಿದ್ಯಾರ್ಥಿಗಳ ಅಗತ್ಯಗಳನ್ನು ಅರಿತು, ಅವರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಷ್ಟ ಪರಿಹಾರವನ್ನು ಯೋಗದ ಮೂಲಕ ಬೋಧಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ‘ಅಯ್ಯಂಗಾರ್ ಯೋಗಎಂಬ ತಮ್ಮದೇ ಬ್ರಾಂಡ್ ಒಂದನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಅವರದ್ದು. ಬೆಲ್ಟ್ಗಳು, ಬ್ಲಾಕ್ಗಳು ಹಾಗೂ ಚಾದರಗಳನ್ನು ಬಳಸಿಕೊಂಡು ಯೋಗಾಸನ ಮಾಡುವುದನ್ನು ಅವರು ಅಳವಡಿಸಿಕೊಂಡರು. ಯಾವುದೇ ದೈಹಿಕ ಸಮಸ್ಯೆಯಾದೀತೆಂಬ ಭೀತಿ ಇಲ್ಲದೆ ಸಂಕೀರ್ಣ ಆಸನಗಳನ್ನು ಹಾಕಲು ಯುವಕರನ್ನು ಅವು ಪ್ರೇರೇಪಿಸಿದವು. ಹೀಗೆ ಜಗತ್ತಿನಾದ್ಯಂತ ಯೋಗವನ್ನು ಪಸರಿಸಿದ ಹಿರಿಮೆ ಅಯ್ಯಂಗಾರರದ್ದು.
        ಇಂದು ವಿಶ್ವದಾದ್ಯಂತ ಅಯ್ಯಂಗಾರರ ಶಿಷ್ಯರಿದ್ದಾರೆ. 1975ರಲ್ಲಿ ಪುಣೆಯಲ್ಲಿ ಅವರು ತಮ್ಮ ಮಡದಿಯ ಸ್ಮರಣೆಯಲ್ಲಿ ಸ್ಥಾಪಿಸಿದ ರಮಾಮಣಿ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆ ಕೂಡ ಅವರ ಕನಸುಗಳನ್ನು ಮುಂದುವರಿಸುತ್ತಿದೆ.
ಜಿಡ್ಡು ಕೃಷ್ಣಮೂರ್ತಿ, ಜಯಪ್ರಕಾಶ್ ನಾರಾಯಣ್, ಕಾದಂಬರಿಕಾರ ಆಲ್ಡಸ್ ಹಕ್ಸ್ಲಿ, ವಯೋಲಿನ್ ವಾದಕ ಯೆಹೂದಿ ಮೆನುಹಿನ್, ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದ್, ಇಂಡೋನೇಷ್ಯಾ ಉಪರಾಷ್ಟ್ರಪತಿ ಡಾ|| ಮೊಹಮ್ಮದ್ ಹಟ್ಟಾ, ರಷ್ಯಾ ಪ್ರಧಾನಿ ಮಾರ್ಷಲ್ ಬುಲ್ಗಾನಿನ್, ಜನರಲ್ ಕೆ.ಎಸ್. ತಿಮ್ಮಯ್ಯ, ಪೋಪ್ ಪಾಲ್- -VI ಸೇರಿದಂತೆ ವಿವಿಧ ಮತ-ಧರ್ಮಗಳಿಗೆ ಸೇರಿದ ವಿಶ್ವದ ಅನೇಕ ಖ್ಯಾತನಾಮರು ಅಯ್ಯಂಗಾರರಿಂದ ಯೋಗ ಕಲಿತವರು. ಬೆಲ್ಜಿಯಂನ ಎಲಿಜಬೆತ್ ಕ್ವೀನ್ ತಮ್ಮ 80ನೇ ವಯಸ್ಸಿನಲ್ಲಿ ಶೀರ್ಷಾಸನ ಹಾಕುವಂತೆ ಮಾಡಿದ ಶ್ರೇಯಸ್ಸು ಅಯ್ಯಂಗಾರರಿಗೆ ಸಲ್ಲುತ್ತದೆ.

ಯೋಗಕಲೆಯನ್ನು ಇನ್ನಷ್ಟು ಜನರಿಗೆ ತಲಪಿಸಲು 1966 ರಲ್ಲಿ ಅವರ ಬೋಧನೆಗಳುಲೈಟ್ ಆನ್ ಯೋಗಕೃತಿಯ ರೂಪದಲ್ಲಿ ಹೊರಬಂದವು. ಅಷ್ಟು ಮಾತ್ರವಲ್ಲದೆ ಸುಮಾರು 18 ಭಾಷೆಗಳಿಗೆ ಕೃತಿ ಅನುವಾದಗೊಂಡಿದೆ. ಇದರ ಕನ್ನಡಾನುವಾದಯೋಗದೀಪಿಕಾಒಂದೇ ಪುಸ್ತಕ 30 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ‘ಲೈಟ್ ಆನ್ ಪ್ರಾಣಾಯಾಮ’, ‘ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ’ - ಅವರ ಇತರ ಪ್ರಮುಖ ಪ್ರಕಟಿತ ಕೃತಿಗಳು.

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಜೀ (1890–1996):
    
   ಮೂಲತಃ ಉಡುಪಿಯ ಬಾರಕೂರಿನವರಾದ ಸ್ವಾಮಿಜೀಯವರ ಕಾರ್ಯಕ್ಷೇತ್ರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ.ಗ್ರಾಮೀಣ ಭಾಗಗಳಲ್ಲಿ ಯೋಗವನ್ನು ಕೊಂಡೊಯ್ದ ಕೀರ್ತಿ ಇವರದು.
 ಬಾಲ್ಯದಲ್ಲಿಯೇ ದೇವರನ್ನು ಕಾಣುವ ಉದ್ದೇಶದಿಂದ ಮಠ-ಮಂದಿರಗಳೆಂದು ಅಲೆದಾಟ ನಡೆಸಿ, ಸ್ವಾಮಿ ಶಿವಾನಂದರ ಆಶ್ರಯದಲ್ಲಿ ಧ್ಯಾನಮಾರ್ಗವನ್ನು ಹಿಡಿದು, ಬ್ರಹ್ಮಚರ್ಯದ ವ್ರತಧಾರಣೆ ಮಾಡಿದವರು ರಾಘವೇಂದ್ರರಾವ್ ಅವರು. ಬರೋಡಾದ ಪ್ರೊ. ರಾಜರತ್ನ ಮಾಣಿಕ್ರಾಯರವರಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿ, ಪ್ರಸಿದ್ಧ ಆಯುರ್ವೇದ ತಜ್ಞ ಪಂಡಿತ್ ಲಕ್ಷ್ಮಣ ಬಾಬಾರವರಲ್ಲಿ ಆಯುರ್ವೇದ ವೈದ್ಯವಿದ್ಯೆಯ ಜ್ಞಾನವನ್ನು ಗಳಿಸಿದ ಅವರು ಗಾಂಧೀಜಿಯವರ ಪ್ರಭಾವದಿಂದ ಗ್ರಾಮೀಣ ಭಾರತದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಪಣತೊಟ್ಟರು.ಆಗ ಅವರಲ್ಲಿದ್ದ ಆಸ್ತಿ ಯೋಗ ಮತ್ತು ಆಯುರ್ವೇದ.
ಕರ್ನಾಟಕಕ್ಕೆ ಮರಳಿಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ ನಿರಂತರ 41 ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗತೃಗೊಳಿಸುತ್ತಾ ಊರುರು ಸುತ್ತುತ್ತಿದ್ದರು. ಇವರನ್ನು ಜನವ್ಯಾಯಾಮ ಮೇಷ್ಟ್ರುಎಂದೇ ಕರೆದರು.
      ಹೀಗೆ ಯೋಗ ಶಿಬಿರದ ಸುತ್ತಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬಂದ ಸ್ವಾಮೀಜಿ (1942) ಕಾಲರಾ ಮಾರಿಯ ಹಾವಳಿಯಿಂದ ಸಂತೃಪ್ತ ಜನರ ಕಣ್ಣೀರೊರಿಸಲು ನಿಂತರು. ಸ್ವತಃ ಮನೆಮನೆಗೆ ತೆರಳಿ ಜೌಷಧಿ ನೀಡಿ ರೋಗಿಗಳನ್ನು ಬದುಕಿಸಿದ್ದು ಮಾತ್ರವಲ್ಲದೇ ಊರ ಜನರಲ್ಲಿ ಶುಚಿತ್ವದ ಜಾಗೃತಿ ಮೂಡುವ ಸಲುವಾಗಿ ತಾವೇ ಪೊರಕೆ ಹಿಡಿದು ಮನೆ-ಅಂಗಳವನ್ನು ಶುಚಿಗೊಳಿಸಿದರು. ಜನರಿಗೆ ಜೀವನ ವಿಧಾನ, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವ, ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಸಿದರು. ನಿಧಾನವಾಗಿ ಮಲ್ಲಾಡಿಹಳ್ಳಿಯ ವಾತಾವರಣವೇ ಬದಲಾಯಿತು. ಊರೂರು ಅಲೆಯುತ್ತಾ ಯೋಗ ಶಿಬಿರಗಳನ್ನು ನಡೆಸುತ್ತಿದ್ದವ್ಯಾಯಾಮ ಮೇಷ್ಟ್ರುಮಲ್ಲಾಡಿಹಳ್ಳಿಯ ಜನರಿಗೆಸ್ವಾಮೀಜಿ” ಯಾದರು. ಊರಪರಿವರ್ತನೆಗೆ ಕಾರಣವಾದ ಅವರ ನಿರ್ಮಲ ಅಂತಃಕರಣದ ಸೇವೆಯಿಂದ ಜನರೆಲ್ಲಾ ತಮ್ಮ ಊರಿನಲ್ಲಿಯೇ ಶಾಶ್ವತವಾಗಿ ನೆಲೆಸಲು ಬೇಡಿಕೊಂಡರು.
       ಸದಾ ನೊಂದಜೀವಗಳ ಬಗೆಗೆ ಚಿಂತಿಸುತ್ತಿದ್ದ ಸ್ವಾಮಿಜಿ ಅವರ ಬೇಡಿಕೆಗೆ ಗಂಟುಬಿದ್ದರು. ಅನಾಥ ಮಕ್ಕಳಿಗಾಗಿ 1943ರಲ್ಲಿಅನಾಥಸೇವಾಶ್ರಮಪ್ರಾರಂಭಿಸಿ ಅಸಂಖ್ಯಾತ ಜನರ ಬದುಕಿಗೆ ಅಧಾರವಾದರು. ಇವರು ಕಾವಿ ಧರಿಸಲಿಲ್ಲ. ಕೇವಲ ಖಾದಿಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿದರು. ಅವರದು ಕಟ್ಟುನಿಟ್ಟಿನ ದಿನಚರಿಯ, ನಿತ್ಯ ಯೋಗ, ಸರಳ ಜೀವನ. ಸೇವೆಗಾಗಿಯೇ ಬದುಕು ಮೀಸಲು.
    ಆಶ್ರಮದಲ್ಲಿ ಚಟುವಟಿಕೆಗಳ ಜೊತೆಜೊತೆಗೇ ಯೋಗಶಿಕ್ಷಣ ಮತ್ತು ಆಯುರ್ವೇದಚಿಕಿತ್ಸೆ ಸಾಗುತ್ತ ಬಂದವು. ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಸುಲಭವಾಗಿ ಶಿಕ್ಷಣಾನುಕೂಲ ಒದಗಿಸುವುದಕ್ಕಾಗಿ ವಿವಿಧ ರೀತಿಯ ಶಾಲೆಗಳನ್ನು ಆರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ಕೈಯಾರೆ ಬೆಳೆಸಿದರು. ಜನರಿಗೆ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕಲೆ - ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಪರಿಜ್ಞಾನ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಶ್ರಮವನ್ನು ಸಮಾಜಮುಖಿಯಾಗಿ ಬೆಳೆಸುತ್ತಾ ಹೋದರು.
 ಇದರ ನಡುವೆಯೂ ಸ್ವಾಮೀಜಿಯ ಆದ್ಯತೆ ಇದ್ದುದು ಯೋಗಪ್ರಸಾರ - ಯೋಗಶಿಕ್ಷಣಕ್ಕೆ. ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರ ಎಂಬ ಹೆಸರಿನಲ್ಲಿ ಪ್ರತಿವರ್ಷ ಆಕ್ಟೋಬರ್ ತಿಂಗಳ 4 ರಿಂದ 25 ವರೆಗೆ 21 ದಿನಗಳ ಯೋಗಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದರು. ದೇಶ-ರಾಜ್ಯದ ನಾನಾ ಭಾಗಗಳ ಸಾವಿರಾರು ಮಂದಿ ಯೋಗಾಸಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಯೋಗಪ್ರಸಾರಕ್ಕಾಗಿ ರಾಜ್ಯಾದ್ಯಂತ ಬೇರೆಬೇರೆ ಕಡೆಗಳಲ್ಲಿ ನಿರಂತರ ಯೋಗಪ್ರದರ್ಶನಗಳನ್ನೂ ನಿರಂತರವಾಗಿ ನಡೆಸುತ್ತಿದ್ದರು.

 ಕರ್ನಾಟಕದ ಗ್ರಾಮೀಣ ಭಾಗಗಳಿಗೆ ಯೋಗವನ್ನು ಕೊಂಡೊಯ್ದವರಲ್ಲಿ ಮಲ್ಲಾಡಿಹಳ್ಳಿ ಸ್ವಾಮೀಜಿಗಳಿಗೆ ಮಹತ್ವದ ಪಾತ್ರವಿದೆ.


 ಅಜಿತ್ ಕುಮಾರ್ (27-8-1934 4-12-1990)      
ಮುಕ್ತಸಂಗೋsನಹಂವಾದೀ ಧೃತ್ಯುತ್ಸಾಹ ಸಮನ್ವಿತಃ |
ಸಿದ್ದ್ಯಸಿದ್ದ್ಯೋರ್ನಿವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ||
  ಮೋಹವಿಲ್ಲದೇ,ಅಹಂಕಾರಿಯಾಗದೆ, ಧೈರ್ಯ, ಉತ್ಸಾಹಗಳನ್ನು ತುಂಬಿಕೊಂಡು ಜಯ ಪರಾಜಯಗಳಲ್ಲಿ ಮತಿಗೆಡದೆ ಮುನ್ನುಗ್ಗುವವನನ್ನೇ ಸಾತ್ತ್ವಿಕ ಕಾರ್ಯಕರ್ತ ಎನ್ನುವರು. ಅಂತಹ ಕಾರ್ಯಕರ್ತ ಯಾರು ಎಂಬ ಪ್ರಶ್ನೆಗೆ ನಿಶ್ಚಿಂತರಾಗಿ ತಕ್ಷಣ ಅಜಿತ್ ಎಂದು ಉತ್ತರಿಸಬಹುದು. ಅವರು ತಮ್ಮ ಮನದ ಕಲ್ಪನೆಗಳಿಗೆಲ್ಲ ರೂಪುಕೊಟ್ಟರು. ಅಷ್ಟೇ ಅಲ್ಲ ಜಗತ್ತಿನಲ್ಲಿ ಉತ್ತಮರ ಕಲ್ಪನೆಗಳೆಲ್ಲವನ್ನೂ ತಮ್ಮದಾಗಿಸಿಕೊಂಡರು. ಎಲ್ಲರಲ್ಲೂ ಯೋಗ್ಯ ದಿಕ್ಕು, ಹೊಸ ಧೈರ್ಯ-ಉತ್ಸಾಹ ತುಂಬಿದರು. ಕಲ್ಪನೆಗಳಿಗೆ ತಮ್ಮ ಶಕ್ತಿಯನ್ನೂ ತಪಸ್ಸನ್ನೂ ತುಂಬಿ ಯಶಗೊಳಿಸಿ ತಾವು ಮಾತ್ರ ಯಾವುದನ್ನೂ ತಮ್ಮದೆಂದು ಹೇಳದೆ ಹಿಂದೆಯೇ ಉಳಿದ ನಮ್ರ ಸೇವಾಮೂರ್ತಿ ಅಜಿತ್ಕುಮಾರ್. ಇದು ಅಜಿತರ ಒಡನಾಡಿಯೂ ಸಂಘದ ಹಿರಿಯ ಪ್ರಚಾರಕರೂ ಆದ ಮಾನ್ಯ ಕೃಷ್ಣಪ್ಪನವರ ಮಾತು.
  ಅಜಿತ್ ಕುಮಾರ್ ಎಂದರೆ ಹೊಸ ಆಲೋಚನೆಗಳು, ಹೊಸ ಹೊಸ ಆವಿಷ್ಕಾರಗಳು ಎಂದೇ ಸಂಘವಲಯದಲ್ಲಿ ಜನಜನಿತ. ಹಲವಾರು ಹೊಸ ಯೋಚನೆಗಳಿಗೆ ಕೃತಿರೂಪ ನೀಡಿದವರು ಅಜಿತ್ಕುಮಾರ್. ಇಂದು ಸಂಘದ (ರಾಷ್ಟ್ರೀಯ ಸ್ವಯಂಸೇವಕ ಸಂಘದ) ಶಾಖೆಯ ಬಹುಮುಖ್ಯ ಭಾಗವಾಗಿರುವ ಸೂರ್ಯನಮಸ್ಕಾರ, ಯೋಗಾಸನಗಳನ್ನು ಮೊತ್ತಮೊದಲು ಅಳವಡಿಸಿದವರು ಅಜಿತ್ ಕುಮಾರ್ ಅವರು.
 ಅದಾಗ ಯೋಗಾಸನದ ಹೆಸರು ಅಲ್ಲಿ-ಇಲ್ಲಿ ಕೇಳಿಬರುತ್ತಿತ್ತು. ಸಂಘದಲ್ಲಿಯೂ ಯೋಗಾಸನ ಕಲಿಸಿದರೆ ಹೇಗೆ ಎಂಬ ಯೋಚನೆ ಮೂಡುತ್ತಿದ್ದಂತೆಯೇ ಅಜಿತ್ಕುಮಾರ್ ಅದಕ್ಕೆ ಸಿದ್ಧವಾಗಿ ನಿಂತರು. ಅದಾಗಲೇ ಯೋಗದಲ್ಲಿ ಸಾಧನೆ ಮಾಡಿದ್ದ ಮೈಸೂರಿನ ಪಟ್ಟಾಭಿ ಜೋಯಿಸರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ವಾರಕ್ಕೆ - ದಿನ ನಿರಂತರ ಮೈಸೂರಿಗೆ ಹೋಗಿ ಅವರಿಂದ ಯೋಗತರಬೇತಿ ಪಡೆದು ಬಂದರು. ಆನಂತರ ಬಿ.ಕೆ.ಎಸ್. ಅಯ್ಯಂಗಾರ್ ಅವರ ಬಳಿಯೂ ಯೋಗ ಕಲಿತರು. ಸಂಘದ ಸ್ವಯಂಸೇವಕರಿಗೆ ಯೋಗಾಸನ ಕಲಿಸುವ ಯೋಜನೆಯೂ ರೂಪತಳೆಯಿತು.
ಸ್ವಯಂಸೇವಕರನ್ನು ತರಬೇತಿಗೊಳಿಸುವ ಸಲುವಾಗಿ ನಡೆಯುವ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಪ್ರಾರಂಭವಾಯಿತು. ನಿಧಾನವಾಗಿ ಸಂಘವಲಯಗಳಲ್ಲಿ ಯೋಗ ಶಿಕ್ಷಣದ ಗುಂಗು ಎದ್ದಿತು. ಯೋಗಾಸಕ್ತರಿಗೆ ತರಬೇತಿ ನೀಡುವ ಯೋಗಶಿಕ್ಷಕರ ತಯಾರಿಗಾಗಿ ಅಲ್ಲಲ್ಲಿ ಸ್ವತಃ ತಾವೇ ಮುಂದೆ ನಿಂತು ಪ್ರಶಿಕ್ಷಣ ವರ್ಗಗಳನ್ನು ನಡೆಸಿದರು. ಇವರ ಕಾರ್ಯದ ಪ್ರಭಾವ ಎಷ್ಟು ವ್ಯಾಪಿಸಿತ್ತೆಂದರೆ ನಾಗಪುರದಲ್ಲಿ ನಡೆಯುವ ತೃತಿಯ ವರ್ಷದ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಕಲಿಕೆ ಒಂದು ವಿಷಯವಾಯಿತು. ಅಲ್ಲಿನ ಯೋಗಾಸನ ಪಠ್ಯಕ್ರಮ ರಚನೆಯಲ್ಲೂ ಅಜಿತರು ಮುಂದೆ ನಿಂತರು.
 ನಿಧಾನವಾಗಿ ಸಮಾಜದಲ್ಲೂ ಯೋಗದ ಜನಪ್ರಿಯತೆ ಹೆಚ್ಚಿತು. ಬೆಂಗಳೂರಿನ ಯೋಗಾಸಕ್ತರಿಗಾಗಿ ಅಜಿತ್ ಪ್ರೇರಣೆಯಿಂದಲೇ ಜಯನಗರದಲ್ಲಿ 1972ರ ಸುಮಾರಿಗೆ "ರಾಷ್ಟ್ರೋತ್ಥಾನ ಶಾರೀರಿಕ ಯೋಗಕೇಂದ್ರ" ತಲೆ ಎತ್ತಿತು. ಸ್ವತಃ ತಾವೇ ಯೋಗಾಸನ ತರಗತಿಗಳಿಗೆ ಸಲಹೆಗಾರರಾಗಿ ಮಾರ್ಗದರ್ಶನ ಮಾಡಿದರು. ಅನೇಕ ಯೋಗಶಿಕ್ಷಕರನ್ನು ತರಬೇತಿಗೊಳಿಸಿದರು.
 ಸಂಘ ಶಿಕ್ಷಾ ವರ್ಗಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಶಿಕ್ಷಾರ್ಥಿಗಳಿಗೆ ಔಷಧನೀಡಲು ಸ್ವತಃ ವೈದ್ಯರಾದರು. ಯೋಗವನ್ನು ಚಿಕಿತ್ಸಾಕ್ರಮವಾಗಿ ಮಾಡುವ ಸಲುವಾಗಿ ಶರೀರಶಾಸ್ತ್ರದ ಅಧ್ಯಯನ ನಡೆಸಿದರು. ಕಾರ್ಯಕ್ಕೆ ಅಗತ್ಯಬಿದ್ದಂತೆ ಮನೋವಿಜ್ಞಾನ, ಲೆಕ್ಕಪತ್ರ ಮುಂತಾದವನ್ನು ಕಲಿತರು. ಲೋಕಹಿತಕ್ಕಾಗಿ ಗಳಿಸಿದ ಪರಿಣತಿಯನ್ನು ಇತರರಿಗೂ ತಿಳಿಸುವ ಸಲುವಾಗಿ ಶರೀರ, ಲವಲವಿಕೆ, ವ್ಯಾಯಾಮ, ಕ್ರೀಡೆ ಇವುಗಳ ಕುರಿತುಉತ್ಥಾನಮಾಸಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಅವುಗಳ ಸಂಕಲನಶರೀರ ಶಿಲ್ಪಪುಸ್ತಕವಾಗಿ ಹೊರಬಂದಿದೆ.
  1975ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿ ಅಜಿತ್ರು ಬೆಂಗಳೂರಿನ ಕೇಂದ್ರಕಾರಾಗೃಹಕ್ಕೆ ತಳ್ಳಲ್ಪಟ್ಟರು. ಅಲ್ಲಿಯೂ ಅವರ ದಿನನಿತ್ಯದ ಭಾಗವಾಗಿ ಯೋಗ ಮುಂದುವರಿದಿತ್ತು. ಜೈಲಿನಲ್ಲಿಯೇ ಸಹಬಂದಿಗಳಿಗಾಗಿ ಯೋಗ ತರಗತಿಗಳನ್ನು ನಡೆಸಿದರು. ಸೆರೆಮನೆಯನ್ನೇ ಗುರುಮನೆಯಾಗಿಸಿದ ಅಜಿತರು ಅನೇಕ ಸಾಮಾಜಿಕ-ರಾಜಕೀಯ ನಾಯಕರಿಗೆ ಗುರುಗಳಾದರು. ದಿನಕಳೆದಂತೆ ಗ್ರಂಥ ರಚನೆಯ ಕಲ್ಪನೆಯೂ ಮೂಡಿತು. ತರಗತಿಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದ ರಾಷ್ಟ್ರೋತ್ಥಾನ ಪರಿಷತ್ ಅಂದಿನ ಪ್ರಮುಖರಾಗಿದ್ದ ಮೈ.. ಜಯದೇವ ಇದನ್ನು ಪ್ರೋತ್ಸಾಹಿಸಿದರು. ಕಲ್ಪನೆ ಬಲವಾಗಿ, ಲೇಖನದ ಬಹುಭಾಗ ಸೆರೆಮನೆಯಲ್ಲಿಯೇ ತಯಾರಾಗಿ ಕಲ್ಪನೆ ಸಾಕಾರಗೊಂಡಿತು. 'ಯೋಗಪ್ರವೇಶಎಂಬ ಅಮೂಲ್ಯ ಗ್ರಂಥ ಪುಸ್ತಕ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಹೊರಬಂದಿತು. ಲೇಖಕ-ಪ್ರಕಾಶಕ ಒಟ್ಟಿಗೇ ಕಾರಾಗೃಹದಲ್ಲಿ ಕಲೆತು ನಿರ್ಮಾಣ ಮಾಡಿದ ಭಾಗ್ಯ ಪುಸ್ತಕಕ್ಕಿದೆ.
 ಅಜಿತರೇ ಹೇಳುವಂತೆ, ಪುಸ್ತಕ ನಿರ್ಜೀವ ಗ್ರಂಥ ಅಲ್ಲ; ಜೀವಂತ ಶಿಕ್ಷಕ. ಹೆಜ್ಜೆಹೆಜ್ಜೆಗೂ ಎಚ್ಚರಿಸುವ, ಆಲಸ್ಯ ದೂರಮಾಡುವ, ಮುಂದಿನ ಏರುವಿಕೆಯನ್ನು ಸರಳಗೊಳಿಸುವ ಮಾರ್ಗದರ್ಶಿ... ಇದೊಂದು ಅಧ್ಯಯನದ ಗ್ರಂಥವಲ್ಲ; ಕೃತಿಯ ಕೈಪಿಡಿ. ಅನುಭವಕ್ಕೇ ಮೊದಲ ಪಟ್ಟ. ಆನಂಧವೇ ಅದರ ಸವಿ! - ಎಂದಿದ್ದಾರೆ. ಇದು ಎಷ್ಟು ಪ್ರಖ್ಯಾತಿ ಗಳಿಸಿದೆ ಎಂದರೆ ಈವರೆಗೆ 18 ಬಾರಿ ಮರುಮುದ್ರಣಗೊಂಡಿದೆ. ಸಾವಿರಾರು ಯೋಗಪಟುಗಳನ್ನು ರೂಪಿಸಿದೆ.
ಹೀಗೆ ಸಂಘದ ಮೂಲಕ ಸಮಾಜದ ಬೇರುಗಳಿಗೆ ಯೋಗವನ್ನು ಕೊಂಡೊಯ್ದ ಕೀರ್ತಿ ಅಜಿತರದ್ದು.

ತಿರುಮಲೈ ಕೃಷ್ಣಮಾಚಾರ್ಯ (1888-1989)
ಯೋಗದ ಪಿತಾಮಹರೆಂದೇ ಗುರುತಿಸಲ್ಪಟ್ಟ ತಿರುಮಲೈ ಕೃಷ್ಣಮಾಚಾರ್ಯರು ನೂರೊಂದು ವರ್ಷಗಳ ಕಾಲ ಬದುಕಿದವರು. ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಯೋಗ ಚಿಕಿತ್ಸೆಯನ್ನು ನೀಡಿ ರಾಜರ ಗೌರವಕ್ಕೂ ಪಾತ್ರರಾಗಿದ್ದರು. ಇವರು ಸ್ವತಃ ಒಬ್ಬ ಉತ್ತಮ ದೇಹದಾರ್ಢ್ಯ ಪಟುವಾಗಿದ್ದುದರ ಜೊತೆಗೆ ವೇದ ಪಾರಂಗತರೂ, ವ್ಯಾಕರಣ ಪಂಡಿತರೂ ಆಗಿದ್ದರು. ಯೋಗ ಚಿಕಿತ್ಸಕರೆಂದು ಹೆಸರು ಮಾಡಿದ್ದ ಆಚಾರ್ಯರಿಗೆ ಮೈಸೂರಿನ ಅರಸರು ಯೋಗ ಪಟುಗಳಿಗೆ ತರಬೇತಿ ನೀಡುವ ಆಶ್ರಮವೊಂದನ್ನು ಸ್ಥಾಪಿಸಲು ಸಕಲ ರೀತಿಯ ನೆರವು ನೀಡಿದ್ದರು.
ಕೃಷ್ಣಮಾಚಾರ್ಯರು ಚಿತ್ರದುರ್ಗದ ಮುಚುಕುಂದಪುರಂನಲ್ಲಿ ಜನಿಸಿ ತಮ್ಮ ತಂದೆಯಿಂದಲೇ ಆರಂಭಿಕ ಯೋಗ ಶಿಕ್ಷಣವನ್ನು ಪಡೆದರು. ಮರಣಾನಂತರ ಮೈಸೂರಿ ಬಂದವರು. ಅಲ್ಲಿಂದ ಬನಾರಸ್ಸಿಗೆ ತಲುಪಿ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಹಿಮಾಲಯದ ಸಾಧುಗಳ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಿ, ಯೋಗ ಚಿಕಿತ್ಸೆಯಲ್ಲಿ ಪರಿಣಿತಿ ಗಳಿಸಿದರು. ಆಗಿನ ಬ್ರಿಟೀಷ್ ವೈಸ್‌ರಾಯ್ ಆಗಿದ್ದ ಮಧುಮೇಹದಿಂದ ಬಳಲುತ್ತಿದ್ದ ಲಾರ್ಡ್ ಇರ್ವಿನ್‌ಗೆ ಯೋಗ ಚಿಕಿತ್ಸೆಯ ಮೂಲಕ ಗುಣ ಪಡಿಸಿದರು.     
ಕೃಷ್ಣಮಾಚಾರ್ಯರು ಹಠಯೋಗಿಗಳೆಂದು ಹೆಸರಾದವರು. ಆದರೂ ತಮ್ಮ ಯೋಗ ಸಾಧನೆಯ ಕಾಲದಲ್ಲಿ ಭಕ್ತಿ, ಜ್ಞಾನಗಳ ಹಾದಿಯನ್ನು ಬಳಸಿಕೊಂಡು ಪರಿಪೂರ್ಣತೆಯೆಡೆಗೆ ಹೆಜ್ಜೆಯನ್ನಿಟ್ಟರು. ತೀವ್ರತರವಾದ ದೈಹಿಕ ವ್ಯಾಯಾಮಗಳನ್ನು ಒಳಗೊಂಡ ನೂತನ ಸಾಧನಾ ಮಾರ್ಗವನ್ನು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಇವರ ಶಿಷ್ಯರಾದ ಕೃಷ್ಣ ಪಟ್ಟಾಭಿ ಜೋಯಿಸರು ಇದನ್ನೇ ಮುಂದುವರೆಸಿ ’ಅಷ್ಠಾಂಗ ವಿನ್ಯಾಸ ಯೋಗ’ವೆಂದು ಹೆಸರಿಸಿದರು. ಇಂದಿಗೂ ದೇಶವಿದೇಶಗಳ ಯೋಗಶಾಲೆಗಳಲ್ಲಿ ಕಲಿಸಲಾಗುತ್ತಿರುವ ಯೋಗ ಪದ್ಧತಿಗಳು ಕೃಷ್ಣಮಾಚಾರ್ಯರ ಅಷ್ಠಾಂಗ ವಿನ್ಯಾಸ ಯೋಗದ ಮೇಲೆ ಬೆಳೆದಿವೆಯೆಂದರೆ ತಪ್ಪಿಲ್ಲ.
ಯೋಗ ಮಕರಂದ, ಯೋಗಾಸನಗಳು, ಯೋಗ ರಹಸ್ಯ ಮತ್ತು ಯೋಗವಲ್ಲಿ ಎಂಬ ಮಹತ್ವದ ನಾಲ್ಕು ಕೃತಿಗಳನ್ನು ಅವರು ರಚಿಸಿದ್ದಾರೆ. ತಿರುಮಲೈ ಕೃಷ್ಣಮಾಚಾರ್ಯರ ಸುಪುತ್ರ ಟಿ.ಕೆ.ವಿ ದೇಶಿಕಾಚಾರ್ಯರು ಚೆನ್ನೈನಲ್ಲಿ ’ಕೃಷ್ಣಮಾಚಾರ್ಯ ಯೋಗ ಮಂದಿರಂ’ ಎಂಬ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಈ ಯೋಗ ಪದ್ಧತಿಯನ್ನು ಮುಂದುವರೆಸುತ್ತಿದ್ದಾರೆ.  ವಿಶ್ವವಿಖ್ಯಾತ ಯೋಗಾಚಾರ್ಯ ಶ್ರೀ ಬಿ.ಕೆ.ಎಸ್. ಐಯ್ಯಂಗಾರರು ಸಹ ತಿರುಮಲೈ ಕೃಷ್ಣಮಾಚಾರ್ಯರ ಶಿಷ್ಯ ಹಾಗೂ ಸಂಬಂಧಿಕರು. 

Sunday, 22 March 2015


ಭವಿಷ್ಯದ ಕುಡಿಗಳಿಗೆ ತಿಳಿಸಿ; ಆದರ್ಶದ ಕನಸುಕಟ್ಟಬಲ್ಲ 
ಭಾರತ-ಭಾರತಿ ಪುಸ್ತಕಗಳು

ನಾನೇನಾಗಬೇಕು? - ಇದು ಎಲ್ಲರನ್ನೂ ಕಾಡುವ ಸಾಮಾನ್ಯ ಪ್ರಶ್ನೆ. ಉತ್ತರ ಕಂಡುಕೊಳ್ಳುವುದು ಬಹು ಕಷ್ಟದ ಕೆಲಸ. ಯಾಕೆಂದರೆ ನಾನೇನಾಗಬೇಕು ಎಂಬುದನ್ನು ನನಗೆ ತಿಳಿಸುವ ರೋಲ್‌ಮಾಡೆಲ್ (ಆದರ್ಶ) ನಮ್ಮೆದುರಿಗಿರಬೇಕು. ಆಗ ನಾವು 'ನಾನು ಸರ್. ಎಂ. ವಿಶ್ವೇಶ್ವರಯ್ಯನವರಂತಾಗಬೇಕು; ಜಗದೀಶ್ ಚಂದ್ರ ಬೋಸ್‌ರಂತಾಗಬೇಕು, ವಿವೇಕಾನಂದರು ನೀಡಿದ ಆದರ್ಶದ ಮೇಲೆ ಬದುಕಬೇಕು, ಸುಭಾಷ್-ಸಾವರ್‌ಕರ್‌ರಂತಹ ಸಾಹಸಿ-ಚಾಣಾಕ್ಷ ನಾನಾಗಬೇಕು...’ - ಎಂದು ಸುಲಭವಾಗಿ ನಿಶ್ಚಯಿಸಬಹುದು. ಆದರೆ ಇಂದು ನಮ್ಮ ಶಿಕ್ಷಿತ ಸಮೂಹದ ಮುಂದೆ, ಮಕ್ಕಳ ಮುಂದೆ ’ರೋಲ್ ಮಾಡೆಲ್’ಗಳೇ ಇಲ್ಲ. ನಮ್ಮ ಶಿಕ್ಷಣ ಪದ್ಧತಿಯಂತೂ ಈ ಕೆಲಸದಿಂದ ಎಂದೋ ವಿಮುಖವಾಗಿದೆ.
ನಮ್ಮ ಶಿಕ್ಷಣ ಪದ್ಧತಿಗಳಿಂದಾಗಿ ವಿದ್ಯಾಲಯಗಳಿಂದು ಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಮಗುವಿನ ಸಮಗ್ರ ವಿಕಾಸದ ಕೇಂದ್ರವಾಗಬೇಕಿದ್ದ ಶಾಲೆ, ಬರಿ ಅಕ್ಷರ ಕಲಿಕೆಯ ಕೇಂದ್ರವಾಗಿದೆ.
ಜೀವನಾನುಭವವನ್ನು ಗಳಿಸಲು, ಬದುಕಲು ಕಲಿಯಲು, ಹೊರಗಿನ ಪ್ರಪಂಚದೊಂದಿಗೆ ಮಕ್ಕಳು ಬೆರೆಯುವುದೇ ಉಪಾಯ. ಎಷ್ಟೇ ಅಂಕ ಗಳಿಸಿದರೂ ಒಬ್ಬ ಒಳ್ಳೆಯ ಮನುಷ್ಯನಾಗಬೇಕಾದರೆ, ಹೆಚ್ಚು ಹೆಚ್ಚು ನೋಡಬೇಕು, ಕೇಳಬೇಕು, ಓದಬೇಕು, ಅನುಭವಿಸಬೇಕು. ಆಗ ಮಾತ್ರ ಮಕ್ಕಳು ಪ್ರಪಂಚವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ತಮ್ಮ ಬದುಕಿಗೊಂದು ಅರ್ಥ ಕಂಡುಕೊಳ್ಳಲು ಸಾಧ್ಯ.
ಶಿಕ್ಷಣದಿಂದ ವಂಚಿತವಾದ ಬದುಕುವ ಕಲೆ ಹಾಗೂ ರೋಲ್ ಮಾಡೆಲ್(ಮಾದರಿ)ಗಳನ್ನು ಮಕ್ಕಳ ಮುಂದಿಡುವ ಸಲುವಾಗಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಭಾರತ-ಭಾರತಿ ಎಂಬ ಮಕ್ಕಳ ಪುಸ್ತಕ ಮಾಲೆಯನ್ನು ಹೊರತಂದಿದೆ. ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ; ಯಾಕೆ ಬದುಕಬೇಕು-ಹೇಗೆ ಬದುಕಬೇಕು ಎಂಬುದನ್ನು ಭವಿಷ್ಯದ ಕುಡಿಗಳಿಗೆ ತಿಳಿಸಿ; ಆದರ್ಶದ ಕನಸುಕಟ್ಟಬಲ್ಲ ಪುಸ್ತಕಮಾಲೆಯೆಂಬ ಹೆಗ್ಗಳಿಕೆ ಈ ಭಾರತ-ಭಾರತಿ ಪುಸ್ತಕ ಮಾಲೆಯದ್ದು.

೧೯೭೨ರ ನವೆಂಬರ್ ೫ರಂದು ರಾಜ್ಯದ ೩೬ ಕಡೆಗಳಲ್ಲಿ ಮೊದಲ ಹತ್ತು ಪುಸ್ತಕಗಳ ಬಿಡುಗಡೆಯೊಂದಿಗೆ ಪ್ರಾರಂಭಗೊಂಡ ಭಾರತ-ಭಾರತಿ ಪುಸ್ತಕಮಾಲೆಯು ಕನ್ನಡ ಪ್ರಕಟಣೆಯ ಪ್ರಪಂಚದಲ್ಲೊಂದು ಹೊಸ ದಾಖಲೆ ನಿರ್ಮಿಸಿತು. ಅಂದು ಬೆಂಗಳೂರಿನಲ್ಲಿ ಮಾತನಾಡಿದ ಮಕ್ಕಳ ಸಾಹಿತ್ಯದ ಪಿತಾಮಹ ಜಿ.ಪಿ. ರಾಜರತ್ನಂ ’ಭಾರತ-ಭಾರತಿ ಪುಸ್ತಕವಲ್ಲ, ಪೂಜೆ...’ ಎಂದಿದ್ದರು. ಇದು ಅಕ್ಷರಶಃ ಸತ್ಯವೇ ಆಗಿದೆ.


"ಮಕ್ಕಳಿಗೆ ವಿಚಾರ ಶಕ್ತಿ, ವೈಜ್ಞಾನಿಕ ದೃಷ್ಟಿ ಕೊಡಬೇಕು. ವಿಚಾರಶಕ್ತಿ ಉದ್ದೀಪನಗೊಳಿಸಿದಲ್ಲಿ, ವ್ಯಕ್ತಿ ಅವಿವೇಕಿಯಾಗಲಾರ, ವಿವೇಕಿ ಆಗಿಯೇ ಆಗುವನು. ಭರತಖಂಡದ ಸಾವಿರಾರು ಮಹಾಪುರುಷರಿಂದ ಸ್ಫೂರ್ತಿಪಡೆದು ನಮ್ಮ ಎಳೆಯ ಜನಾಂಗ ಬೆಳೆದು ನಾಡನ್ನು ಮೇಲಕ್ಕೆತ್ತಬೇಕು, ಅದರ ಕೀರ್ತಿ ಜಗದ್ವಿಖ್ಯಾತವಾಗಬೇಕು- ಎಂಬ ಉದ್ದೇಶ ’ಭಾರತ-ಭಾರತಿ’ಪುಸ್ತಕ ಸಂಪದದಲ್ಲಿದೆ."
                                                                                                              -  ಕೆ.ವಿ. ಪುಟ್ಟಪ್ಪ 

  ೧೯೭೧ರಲ್ಲಿ ಈ ಕಲ್ಪನೆಯ ಬೀಜಾಂಕುರವಾಯಿತು. ರಾಷ್ಟ್ರೋತ್ಥಾನ ಪರಿಷತ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ನಂ. ಮಧ್ವರಾವ್ ಅವರ ಯೋಚನೆ, ಆರೆಸ್ಸೆಸ್‌ನ ಪ್ರಚಾರಕರಾದ ಯಾದವರಾವ್ ಜೋಶಿ ಅವರ ಹಾರೈಕೆ, ರಾಷ್ಟ್ರೋತ್ಥಾನದ ಆಗಿನ ಪ್ರಧಾನ ವ್ಯವಸ್ಥಾಪಕ ಮೈ.ಚ. ಜಯದೇವ್ ಮತ್ತು ಕಾರ್ಯದರ್ಶಿ ಅರಕಲಿ ನಾರಾಯಣ್ ಅವರಿಂದ ನೀಲನಕ್ಷೆ - ಮಾಸ್ಟರ್ ಪ್ಲಾನ್‌ನಲ್ಲಿ ಹಾಗೂ ಪ್ರೊ. ಎಲ್.ಎಸ್. ಶೇಷಗಿರಿರಾಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಭಾರತ-ಭಾರತಿ ಪುಸ್ತಕ ಪ್ರಕಟಣೆ ಯೋಜನೆ ಪ್ರಾರಂಭವಾಯಿತು. ಒಂದು ದೃಷ್ಟಿಯಿಂದ ಇದು ’ಶೂನ್ಯ’ದಿಂದ ಆದ ಸೃಷ್ಟಿ. ಈ ಯೋಜನೆಯ ಕಲ್ಪನೆ ಮೂಡಿದ ಕಾಲದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಕೈಯಲ್ಲಿದ್ದ ಸಂಪನ್ಮೂಲವೂ ಶೂನ್ಯ. ಶ್ರದ್ಧೆ ಮತ್ತು ಉತ್ಸಾಹವಷ್ಟೆ ಅಲ್ಲಿದ್ದ ಬಂಡವಾಳ. ಆದರೆ ಗುರಿಯ ಸ್ಪಷ್ಟತೆ, ಶ್ರಮ, ಸಿದ್ಧತೆಗಳಿಂದಾಗಿ  ಈ ಇತಿಹಾಸಾರ್ಹ ಯೋಜನೆಯನ್ನು ಸಾಧ್ಯ ಮಾಡಿತು.

 ಆರ್ಥಿಕ ಸಮಸ್ಯೆ ಎದುರಾದಾಗ ಠೇವಣಿಸಂಗ್ರಹ ಯೋಜನೆಯೊಂದನ್ನು ರೂಪಿಸಿ, ೬೫೯ ಠೇವಣಿದಾರರ ರಿಂದ ಒಟ್ಟು ಸುಮಾರು ೭,೪೦,೦೦೦ ರೂ. ಸಂಗ್ರಹಿಸಿ ಕಾರ್ಯವನ್ನು ಮುನ್ನೆಡೆಸಲಾಯಿತು. ಆ ದಿನಗಳಲ್ಲಿ ಮುದ್ರಣ ಕಾಗದದ ಕೊರತೆ ಇತ್ತು. ಮುದ್ರಣಸಾಮರ್ಥ್ಯವೂ ಸಾಕಾಗುವಷ್ಟು ಇರಲಿಲ್ಲ. ಆದರಿಂದ ಬ್ಯಾಂಕ್ ಸಾಲ ಮಾಡಿ ಹೊಸ ಯಂತ್ರಗಳನ್ನು ಖರೀದಿಸಲಾಯಿತು. ಇಡೀ ಯೋಜನೆಗಾಗಿ ಬಳಸಲಾದ ಕಾಗದ ೨೫೫ ಟನ್ನುಗಳಷ್ಟು (ಸುಮಾರು ೧೪,೦೦೦ ರೀಮುಗಳು); ರಕ್ಷಾಪಟಕ್ಕಾಗಿ ಬಳಸಿದ ಆರ್ಟ್‌ಬೋರ್ಡು ೬,೨೦೦ ಗ್ರೋಸ್‌ನಷ್ಟು. ಹೀಗೆ ಮಹತ್ತ್ವದ ದೃಷ್ಟಿಯಿಂದ ಮಾತ್ರವಲ್ಲದೆ ಗಾತ್ರದ ದೃಷ್ಟಿಯಿಂದಲೂ ಭಾರತ-ಭಾರತಿ ಯೋಜನೆ ಅಸಾಧಾರಣವಾದದ್ದು. ಹತ್ತಾರು ಮಂದಿ ಶ್ರದ್ಧಾವಂತರು, ನೂರಾರು ಮಂದಿ ಲೇಖಕರು, ಮತ್ತಿತರ ಸಹಕಾರಿಗಳು ಒಲುಮೆಯಿಂದ ಒಗ್ಗೂಡಿ ದುಡಿದುದರಿಂದ ಶಕ್ಯವಾದ ಈ ಯೋಜನೆ ಒಂದು ಅಪರ್ವ ಜ್ಞಾನಯಜ್ಞ.

ಈ ಯೋಜನೆಗೆ ಹಿಡಿದ ಸಮಯ ಒಟ್ಟು ಎಂಟು ವರ್ಷ. ಅದರಲ್ಲಿ ತುರ್ತುಪರಿಸ್ಥಿತಿಯ ಬೀಗಮುದ್ರೆ ಅವಧಿಯನ್ನು ಕಳೆದರೆ ಯೋಜನೆಗೆ ಹಿಡಿದದ್ದು ಆರೂವರೆ ವರ್ಷ. ಅಷ್ಟು ಸಮಯದಲ್ಲಿ ನಿಗದಿಯಾದಂತೆ ೨೨,೧೪೦ ಪಟಗಳ ಸಾಹಿತ್ಯವನ್ನು ಹೊರತರಲಾಯಿತು. ರಾಜ್ಯದ ಬೇರೆಬೇರೆ ಕಡೆಗಳಲ್ಲಿ ಈ ಸಾಹಿತ್ಯವನ್ನು ಬಿಡುಗಡೆಗೊಳಿಸಲಾಯಿತು. ಅಂದು ನಾಡಿನ ಪ್ರಖ್ಯಾತ ಸಾಹಿತಿಗಳೆನಿಸಿದ್ದವರು ಕಾರ್ಯಕ್ರಮಕ್ಕೆ ಆಗಮಿಸಿ ’ಈ ಸಾಹಿತ್ಯಯಜ್ಞ’ಕ್ಕೆ ಹೆಗಲು ಜೋಡಿಸಿದರು. ಇದರ ಫಲವಾಗಿ ಇಂದಿಗೂ ಮಕ್ಕಳ ಸಾಹಿತ್ಯ ಲೋಕದಲ್ಲಿ ಭಾರತ-ಭಾರತಿ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಮಾತ್ರವಲ್ಲ ಇಂದು ನಾಡಿನ ಹಿರಿಯ ಸಾಹಿತಿಗಳು, ಗಣ್ಯರು, ಸಮಾಜಸೇವಕರು - ತಾವು ಭಾರತ-ಭಾರತಿ ಪುಸ್ತಕಗಳನ್ನೋದಿಯೇ ಬೆಳೆದವರು; ಆ ಪುಸ್ತಕಗಳೇ ನಮ್ಮ ಬದುಕನ್ನು ರೂಪಿಸಿದುದು ಎಂದು ಹೆಮ್ಮೆಯಿಂದ ಹೇಳುತ್ತಿರುವುದನ್ನು ಕೇಳಬಹುದು.
ಭಾರತ-ಭಾರತಿ ಮೊದಲ ಸರಣಿಯ ಮೊದಲ ಹದಿನೈದು ಕಂತಿನ ಪುಸ್ತಕಗಳಿಗೆ ನಾವು ಇಟ್ಟಿದ್ದ ಬೆಲೆ ೭೫ ಪೈಸೆ. ಅಲ್ಲಿಂದಾಚಿನ ಪಸ್ತಕಗಳಿಗೆ ೯೦ ಪೈಸೆ. ಮೊದಲ ಹತ್ತು ಪಸ್ತಕಗಳ ಲೋಕಾರ್ಪಣ ಸಮಾರಂಭದ ದಿವಸವೇ ೧,೩೦,೦೦೦ ಪ್ರತಿಗಳು ಮಾರಾಟವಾದವು.ಇದು ’ಮಕ್ಕಳ ಸಾಹಿತ್ಯ’ ಎಂದು ಕಲ್ಪಿತವಾದ ಯೋಜನೆಯಾದರೂ ಪರಿಣಾಮದಲ್ಲಿ ಅನುಪಮ ’ಆಕರ ಸಾಹಿತ್ಯ’ವಾಗಿ ಪರಿಣಮಿಸಿತು. ಅನೇಕ ಮಹಾಪರುಷರ ಬಗೆಗೆ ಥಟ್ಟನೆ ಹಿನ್ನೆಲೆ ಸಾಮಗ್ರಿ ಬೇಕಾದಾಗ ಲೇಖಕರಿಗೂ ಭಾಷಣಕಾರರಿಗೂ ಈಗಲೂ ಕಲ್ಪವೃಕ್ಷವಾಗಿರುವುದು ’ಭಾರತ-ಭಾರತಿ’ ಮಾಲಿಕೆಯೇ.
ಪಸ್ತಕಗಳಿಗೆ ಎಷ್ಟೋ ಮಾಹಿತಿಗಳನ್ನು ದೇಶದ ಯಾವುದೋ ಮೂಲೆಗಳಿಂದ ಕಷ್ಟಪಟ್ಟು ಸಂಗ್ರಹಿಸಬೇಕಾಯಿತು. ನೆಹರು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ನೇರ ಇಂದಿರಾ ಗಾಂಧಿಯವರಿಂದಲೇ ಕೇಳಿ ತರಿಸಿಕೊಂಡೆವು. ಖಾರವೇಲ, ಅಶ್ಫಾಕ್ ಉಲ್ಲಾ, ದೀಪಂಕರ ಮೊದಲಾದವರ ಬಗೆಗೆ ಭಾರತದ ಯಾವ ಭಾಷೆಯಲ್ಲಿಯೂ ಸಾಹಿತ್ಯ ಅದುವರೆಗೆ ಪ್ರಕಟವಾಗಿರಲೇ ಇಲ್ಲ. ರಾಮಪ್ರಸಾದ್ ಬಿಸ್ಮಿಲ್, ಮೇಡಂ ಕಾಮಾ ಮೊದಲಾದ ಅನೇಕರ ಬಗೆಗೆ ಪ್ರಾಯಶಃ ಕನ್ನಡದಲ್ಲಿ ಹೊರಬಂದ ಮೊದಲ ಪಸ್ತಕಗಳೆಂದರೆ ಅದು ಭಾರತ-ಭಾರತಿಯದ್ದೇ.
 ಈ ಸಾಹಿತ್ಯದ ಶ್ರೇಷ್ಠತೆಯನ್ನು ಅರಿತು ಗುಜರಾತಿ, ತೆಲುಗು, ತಮಿಳು, ಮಲಯಾಳಂ ಮೊದಲಾದ ಇತರ ಭಾಷೆಗಳಲ್ಲೂ ’ಭಾರತ-ಭಾರತಿ’ಯ ಅನುವಾದಗೊಂಡು ಮುದ್ರಣಗೊಂಡಿದೆ. ಹೀಗೆ ಭಾರತದ ಸಾಹಿತ್ಯ ಲೋಕ ಅದರಲ್ಲೂ ಮಕ್ಕಳ ಸಾಹಿತ್ಯ ಲೋಕದಲ್ಲಿ ಇತಿಹಾಸವನ್ನೇ ಸೃಷ್ಟಿಸಿತು. ’ವಾಲ್ಮೀಕಿ ಯಿಂದ ಜಯಪ್ರಕಾಶ್ ನಾರಾಯಣ’ ವರೆಗಿನ ೫೧೦ ಮಹಾಪುರುಷರ ಜೀವನದ ಮೇಲೆ ಬೆಳಕು ಚೆಲ್ಲಿದ ಭಾರತ-ಭಾರತಿ ಪುಸ್ತಕ ಮಾಲೆಯ ಪ್ರಕಟಣೆ ಕಾರ್ಯ ೧೯೮೧ರಲ್ಲಿ ಸಮಾರೋಪಗೊಂಡಿತ್ತು. ಅದಾಗಿ ಇಂದಿಗೆ ಮೂರು ದಶಕಗಳು ಕಳೆದವು. ರಾಷ್ಟ್ರೋತ್ಥಾನ ಸಾಹಿತ್ಯ ವ್ಯವಸ್ಥಾಪಕರಿಗೆ ಅನ್ನಿಸಿತು- ಮೊದಲ ’ಭಾರತ-ಭಾರತಿ’ ಯೋಜನೆ ಮುಗಿದು ಒಂದು ಪೀಳಿಗೆಯಷ್ಟು ಅಂತರ ಕಳೆದಿದೆ. ಅಲ್ಲದೆ ಮೊದಲ ಯೋಜನೆಯಲ್ಲಿ ಸೇರಿರದ ನೂರಾರು ವ್ಯಕ್ತ್ತಿಗಳ ಬಗ್ಗೆ ತಿಳಿಸಬೇಕಾಗಿದೆ. ಹೀಗೆ ಎರಡನೆಯ ಸರಣಿಯ ಆಲೋಚನೆಯ ಉಗಮವಾಯಿತು. ಇದೀಗ ಸಾಹಿತಿ ’ಚಿರಂಜೀವಿ’ ಅವರ ಪ್ರಧಾನ ಸಂಪಾದಕತ್ವದಲ್ಲಿ ೧೦೦ ಮಹಾಪುರುಷರ ಜೀವನಚರಿತ್ರೆಗಳ ಹೊರಬಂದಿವೆ.
ನಾವೇನು ಮಾಡಬಹುದು?
ಇದೀಗ ಮಕ್ಕಳಿಗೆ ರಜೆಯ ಸಮಯ, ಪೋಷಕರು ತಮ್ಮ ಮಕ್ಕಳ ಕೈಗೆ ಬದುಕಲು ಕಲಿಸುವ ಈ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವುದು.
ಮಕ್ಕಳಿಗೆ ಹೊಸಬಟ್ಟೆ, ಆಟಿಕೆಗಳನ್ನು ಖರೀದಿಸುವಂತೆಯೇ ಪೋಷಕರು ಆಗಾಗ ಇಂತಹ ಪುಸ್ತಕಗಳನ್ನು ಖರೀದಿಸಿ ನೀಡುವುದು.
ನಮ್ಮೂರಿನ ಶಾಲೆ, ವಾಚನಾಲಯ ಮುಂತಾದ ಗ್ರಂಥಾಲಯಗಳಲ್ಲಿ ಈ ಪುಸ್ತಕಗಳಿರುವಂತೆ ವ್ಯವಸ್ಥೆ ಮಾಡುವುದು.
ನಮ್ಮೂರಿನ ಶಾಲಾ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳ ಕುರಿತು ಶಾಲಾವಾರು, ತರಗತಿವಾರು ಪ್ರಬಂಧ, ರಸಪ್ರಶ್ನೆ, ಭಾಷಣ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವುದು. ನಿಮಿತ್ತಕ್ಕಾಗಿ ಅಗತ್ಯವಾದಲ್ಲಿ ಸ್ವಾತಂತ್ರ್ಯ, ಗಣರಾಜ್ಯ ದಿನೋತ್ಸವಗಳನ್ನು ಆರಿಸಿಕೊಳ್ಳುವುದು.
ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾ ವಿಜೇತರಾದವರಿಗೆ ಭಾರತ-ಭಾರತಿ ಪುಸ್ತಕಗಳನ್ನು ಬಹುಮಾನವಾಗಿ ನೀಡುವುದು.

ಗಣ್ಯರು ಕಂಡಂತೆ : 
ಮಗುವಿನ ಭಾಷೆ ಮನೋಧರ್ಮ ತಿಳಿದು ಮನಸ್ಸು ತೇಲುವಂತೆ ಆ ಮಟ್ಟಕ್ಕೆ ಇಳಿದು ಬರೆದರೆ ಮನಸ್ಸು ಅರಳುತ್ತದೆ. ಅದು ಮಕ್ಕಳ ಸಾಹಿತ್ಯ ಆಗುತ್ತದೆ. ಭಾರತ-ಭಾರತಿ ಅಂತಹ ಸಾಹಿತ್ಯ.
                                                            - ಕೋಟ ಶಿವರಾಮ ಕಾರಂತ 
ಭಾರತ-ಭಾರತಿ ಪುಸ್ತಕಗಳಿಂದ ಮುಂದಿನ ಜನಾಂಗದಲ್ಲಿ ಭೇದ ಭಾವನೆ ಮಾಯವಾಗಿ ದೇಶದ ಭವಿಷ್ಯ ಉಜ್ವಲಗೊಳ್ಳಲಿ.
                                   - ತಿ.ತಾ. ಶರ್ಮಾ, ಖ್ಯಾತ ಸಾಹಿತಿ, ಪತ್ರಿಕೋದ್ಯಮಿಗಳು 

ಇಂದು ನಮಗೆ ಎಲ್ಲವೂ ಇದೆ. ಆದರೆ ಭಾರತೀಯತೆಗೆ ಬರಗಾಲ. ವಿಶ್ವಕ್ಕೇ ಭಾರತ ದರ್ಶನ ಮಾಡಿಸಿದ ಪೂರ್ವಜರನೇಕರ ಜೀವನ ಪರಿಚಯ ಭಾರತ-ಭಾರತಿ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.
- ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಾಹಿತಿಗಳು 

ಮಕ್ಕಳ ನೆರವಿಗೆ ನಮ್ಮ ದೇಶದ ಪುಣ್ಯಪುರುಷರ ಚರಿತ್ರೆಯ ಅಭ್ಯಾಸವೊಂದೇ ಉಳಿದಿರುವ ಮಾರ್ಗ. ಇಂದಿನ ಶೈಕ್ಷಣಿಕ ತಳಪಾಯವನ್ನು ಸರಿಪಡಿಸಲು ಭಾರತ-ಭಾರತಿ ಪುಸ್ತಕಗಳ ಪ್ರಚಾರ ನಡೆಯಬೇಕು. ಅದಕ್ಕೆ ಸರಕಾರದ ನೆರವೂ ಅಗತ್ಯ.
                                                             - ಜಿ. ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು

ಶ್ರೇಷ್ಠ ಪುರುಷರ ಹಾದಿಯನ್ನು ತಿಳಿಸುವ ಉತ್ತಮ ಸಾಹಿತ್ಯವನ್ನು ಬರೆಸಿ ಸಾಮಾನ್ಯ ಪ್ರಜೆಗೂ ದೊರಕುವಂತೆ ವ್ಯಾಪಕವಾಗಿ ಸಫಲವಾಗಿ ಮಾಡಬಲ್ಲ ರಾಷ್ಟ್ರೋತ್ಥಾನ ಪರಿಷತ್ತು ಈ ಮೂಲಕ ಎಳೆಯರನ್ನು ಸುಸಂಸ್ಕೃತರನ್ನಾಗಿ ಮಾಡಲಿ.
                                                       -  ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು 

....’ರಾಷ್ಟ್ರೋತ್ಥಾನ’ದವರ ಯತ್ನ ನಿಜಕ್ಕೂ ಅಭಿನಂದನೀಯ.... ಈ ಕಾಲ, ಪರಿಸರದಲ್ಲಿ ಇಂತಹ ಸಾಹಿತ್ಯ ತೀರ ಅಗತ್ಯ.. ಬಾಲ್ಯಂದಲೇ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ. ಮುಂದೆ ಉನ್ನತ ಧ್ಯೇಯ ಆದರ್ಶಗಳನ್ನಿರಿಸಿಕೊಂಡು ತಮ್ಮ ಬಾಳನ್ನು ರೂಪಿಸಿಕೊಳ್ಳಲು ಅವರಿಗೆ ಈ ಸಾಹಿತ್ಯ ತುಂಬ ನೆರವಾದೀತು.
.... ಯುವಜನ ಅಶಾಂತಿ, ವಿದ್ಯಾರ್ಥಿಗೊಂದಲ, ಕರ್ತವ್ಯ ಪ್ರಜ್ಞೆಯ ಲೋಪ, ಹಿಪ್ಪಿವಾದದತ್ತ  ಹಂತಹಂತವಾಗಿ ಬೆಳೆಯುತ್ತಿರುವ ಎಳೆಯರ ಒಲವು- ಇವುಗಳನ್ನು ಸಾಕಷ್ಟು ತಗ್ಗಿಸಲು, ಒಂದು ನಿಟ್ಟಿನಲ್ಲಿ ಪರಿಹಾರ ಒದಗಿಸಲು ಇಂತಹ ಸಾಹಿತ್ಯ ಮಾರ್ಗದರ್ಶಿಯಾದೀತು 
                                                                     - ಉದಯವಾಣಿ, ಮಣಿಪಾಲ: ೮-೧೧-೧೯೭೨ 


             ಭಾರತ-ಭಾರತಿ ಮೊದಲ ಸರಣಿಯ ಕೆಲವು ಮಹತ್ವದ ಅಂಶಗಳು
  • ವಾಲ್ಮೀಕಿಯಿಂದ ಜೆ.ಪಿಯವರೆಗೆ ೫೧೦ ರಾಷ್ಟ್ರೀಯ ಮಹಾಪುರುಷರ ಪುಸ್ತಕಗಳ ಪ್ರಕಟನೆ.
  • ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
  • ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
  • ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
  •  ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ.


ನಿಮ್ಮ ಮಕ್ಕಳ ಕೈಯಲ್ಲಿರಲಿ ಈ ಪುಸ್ತಕ
 ಸಭ್ಯತೆ, ಸಂಸ್ಕಾರದಿಂದ ದೂರವಾಗುತ್ತಿರುವ ಯುವಜನತೆಗೆ ದಾರಿ ತೋರಿ, ಮಾರ್ಗದರ್ಶೀಸುವ ಈ ಪುಸ್ತಕಗಳನ್ನುನಮ್ಮ ಮನೆಯಲ್ಲಿ ’ಗ್ರಂಥಾಲಯ’ದಂತೆ ಸಂಗ್ರಹಿಸಿಟ್ಟುಕೊಳ್ಳಬಹುದೇ ಎಂಬುದನ್ನು ಪ್ರತಿಯೊಂದು ಕುಟುಂಬವೂ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ.
ಒಟ್ಟು ಪುಸ್ತಕಗಳು : ೬೧೦
ಪ್ರತಿ ಪುಸ್ತಕದ ಬೆಲೆ : ರೂ. ೧೨.೦೦
(ಕೆಲವು ಶೀರ್ಷಿಕೆಗಳನ್ನು ಹೊರತುಪಡಿಸಿ, 
೧೦೦ಕ್ಕಿಂತ ಅಧಿಕ ಪುಸ್ತಕ ಖರೀದಿಗೆ ರಿಯಾಯಿತಿ ಇದೆ.)

ಆಸಕ್ತರು ಪುಸ್ತಕಗಳಿಗಾಗಿ ಸಂಪರ್ಕಿಸಬಹುದು: 
ರಾಷ್ಟ್ರೋತ್ಥಾನ ಸಾಹಿತ್ಯ, 
ಕೇಶವಶಿಲ್ಪ, ಕೆಂಪೇಗೌಡನಗರ,

 ಪೂರ್ವಾಂಚಲದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ  
ಬುಡಕಟ್ಟು ರಾಣಿ ಗಾಯಿಡಿನ್ ಲೂ

   ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಕಳಚಿಕೊಂಡು ಸ್ವತಂತ್ರಗೊಂಡ ಭಾರತದ ಸಾರ್ವಭೌಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಾವಿಂದು ನೆಮ್ಮದಿಯ ಬಾಳ್ವೆಯನ್ನು ಬದುಕುತ್ತಿದ್ದೇವೆಯೆಂದರೆ ಅದರ ಹಿಂದೆ, ನಾಡಿನ ಭವಿಷ್ಯಕ್ಕಾಗಿ ತವ್ಮ್ಮ ಬದುಕನ್ನೇ ಅರ್ಪಿಸಿದ ಸಹಸ್ರಾರು ಮಂದಿಯ ಬೆವರಿದೆ; ಹುತಾತ್ಮರ ಬಲಿದಾನವಿದೆ. ದುರ್ದೈವ ಸ್ವಾತಂತ್ರ್ಯ ಪಡೆದು ೭ದಶಕಗಳು ಕಳೆದರೂ ಇಂದಿಗೂ ಅಂತಹ ಅನೇಕರು ವಿಸ್ಮರಣೆಯಲ್ಲಿ ಅಜ್ಞಾತರಾಗಿಯೇ ಉಳಿದಿದ್ದಾರೆ. ತೆರೆಯಮೇಲೆ ಕಾಣಿಸುತ್ತಿರುವವರು, ಕಿವಿಗೆ ಕೇಳುತ್ತಿರುವುದು ಬೆರಳೆಣಿಕೆಯ ಮಂದಿ ಮಾತ್ರ. ಹೀಗಿರುವಾಗ ಇಂದಿಗೂ ದೇಶದ ಇತರ ಭಾಗಗಳಿಗೆ ಗೌಪ್ಯವೇ ಆಗಿರುವ ಈಶಾನ್ಯ ಭಾರತ(ಪೂರ್ವಾಂಚಲ)ದಲ್ಲಿ ಸ್ವಾತಂತ್ರ್ಯಕ್ಕಾಗಿ ಬದುಕಿ, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದು ಮಾತ್ರವಲ್ಲದೇ ಸ್ವಾತಂತ್ರ್ಯಪ್ರಾಪ್ತಿಯ ನಂತರವೂ ನಡೆಯುತ್ತಿರುವ ದೇಶವಿರೋಧಿ ಚಟುವಟಿಕೆಯ ವಿರುದ್ಧ ಹೋರಾಟಕ್ಕಿಳಿದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಗಾಯಿಡಿನ್ ಲೂ ಹೆಸರು ಕೇಳಿರದಿದ್ದಲ್ಲಿ ಆಶ್ಚರ್ಯವಿಲ್ಲ. ಆದರೆ ಅವರ ಸ್ಮರಣೆಯಲ್ಲಿ ಕರ್ತವ್ಯದ ಭಾಗವೂ ಅಡಗಿದೆ. ಈ ವರ್ಷ (೨೦೧೫) ಆಕೆಯ ಜನ್ಮಶತಮಾನೋತ್ಸವ ವರ್ಷದ ಸುಸಂಧರ್ಭದಲ್ಲಿ ಆಕೆಯನ್ನು ನೆನೆಯುವುದು ಪ್ರಸ್ತುತವೆನಿಸುತ್ತದೆ.
ರಾಣಿ ಗಾಯಿಡಿನ್, ಹುಟ್ಟಿದ್ದು ರಾಜಮನೆತದಲ್ಲಲ್ಲ. ಈಗಿನ ಮಣಿಪುರದ ತಮೆಂಗ್‌ಲಾಂಗ್ ಜಿಲ್ಲೆಯ ಲಂಗ್‌ಕಾವ್ ಗ್ರಾಮದ ಕಾಬುಯಿ ಕುಲದ ಸಾಮಾನ್ಯ ನಾಗಾ ಪುರೋಹಿತ ಕುಟುಂಬದಲ್ಲಿ, ಜನವರಿ ೨೬, ೧೯೧೫ರಂದು. ತಂದೆ ಲೊತೊನಾಂಗ್ ಹಾಗೂ ತಾಯಿ ಕೆಲುವತ್ಲಿನ್‌ಲಿಯು ದಂಪತಿಗಳ ಎಂಟುಮಂದಿ ಮಕ್ಕಳಲ್ಲಿ ಎಳನೆಯವಳು. ಕಾಕತಾಳೀಯವೋ ಏನೋ! ಆಕೆಯು ಜನಿಸಿದ ಕೆಲವೇ ದಿನಗಳಲ್ಲಿ ಗ್ರಾಮಕ್ಕೆ ಹಲವು ಸಮಯದಿಂದ ಆವರಿಸಿದ್ದ ಆತಂಕ, ಸಮಸ್ಯೆಗಳೆಲ್ಲವೂ ಒಂದೊಂದಾಗಿ ಪರಿಹಾರಗೊಳ್ಳ ತೊಡಗಿದ್ದವು. ಹೀಗಾಗಿ ಗ್ರಾಮದ ಜನರೆಲ್ಲ ಆಕೆಗೆ ’ಗಾಯಿಡಿನ್ ಲೂ’ ಎಂದು ನಾಮಕರಣ ಮಾಡಿದರು. ನಾಗಾ ಜನರ ಭಾಷೆಯಲ್ಲಿ ’ಗಾಯಿ’ ಅಂದರೆ ’ಒಳ್ಳೆಯ’ ಹಾಗೂ ’ಡಿನ್’ ಅಂದರೆ ’ಮಾರ್ಗ ತೋರಿಸುವವರು’ ಎಂದು. ಗಾಯಿಡಿನ್ ಲೂ ಅಂದರೆ ’ಒಳ್ಳೆಯ ಮಾರ್ಗ ತೋರಿಸುವವರು’ ಎಂದರ್ಥ.
ಗಾಯಿಡಿನ್ ಹುಟ್ಟಿನಿಂದ ರಾಣಿಯಲ್ಲ. ಆಕೆಯನ್ನು ರಾಣಿ ಎಂದು ಕರೆದದ್ದು ಅಂದಿನ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಜವಹರಲಾಲ್ ನೆಹರು. ೧೯೩೭ರ ಅಸ್ಸಾಂ ಪ್ರವಾಸದ ವೇಳೆ ಜೈಲಿನಲ್ಲಿ ಗಾಯಿಡಿನ್‌ಳನ್ನು ಬೇಟಿ ಮಾಡಿದ ನೆಹರು ಆಕೆಯ ಸಾಹಸವನ್ನು ಕೇಳಿ, ನೀನು ಸಾಮಾನ್ಯಳಲ್ಲ, ತಾಯಿ. ನೀನು ರಾಣಿ, ನಾಗಾರಾಣಿ ಎಂದು ಉದ್ಗರಿಸಿದ್ದರು. ಈಗಾಗಲೇ ೬ ವರ್ಷ ಜೈಲಿನಲ್ಲಿ ಕಳೆದಿದ್ದ ಆಕೆ ಇನ್ನೂ ೨೨ರ ಹರೆಯದವಳು. ೧೬ನೇ ವಯಸ್ಸಿಗೇ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ ಬಂಧನಕ್ಕೋಳಗಾಗಬೇಕಾದರೆ ಆಕೆಯದ್ದೆಂತಹ ಸಾಹಸವಿರಬೇಕು, ಹೇಳಿ!
 ಭಾರತದಲ್ಲಿ ಶಾಶ್ವತವಾಗಿ ನೆಲೆಯೂರಲು ಬ್ರಿಟಿಷರು ಅನೇಕ ತಂತ್ರಗಳನ್ನು ಪ್ರಯೋಗಿಸುತ್ತಿದ್ದರು. ಸ್ವಾತಂತ್ರ್ಯಹೋರಾಟಗಾರರನ್ನು ದಮನಧೋರಣೆಗಳಿಂದ ಹತ್ತಿಕ್ಕುವುದು ಒಂದೆಡೆಯಾದರೆ, ಇನ್ನೊಂದೆಡೆ ಭಾರತೀಯರಿಗೆ ಸ್ವಂತದ ಬಗೆಗೆ ಕೀಳರಿಮೆ ಹಾಗೂ ಬ್ರಿಟಿಷರೇ ಶ್ರೇಷ್ಠರು ಎಂಬ ಮನೋಭಾವ ಮೂಡಿಸುವ ವ್ಯವಸ್ಥಿತ ಷಡ್ಯಂತ್ರ ಸರಕಾರದ ಕೃಪಾಕಟಾಕ್ಷದಲ್ಲಿ ನಡೆಯುತ್ತಿತ್ತು. ಇದರ ಪ್ರಮುಖಭಾಗವಾಗಿ ಭಾರತೀಯರನ್ನು ಕ್ರೈಸ್ತಮತಕ್ಕೆ ಮತಾಂತರಿಸಿ ಅವರನ್ನು ತಮ್ಮ ಮೂಲ ಸಂಸ್ಕೃತಿಯಿಂದ ದೂರಗೊಳಿಸುವ ಕಾರ್ಯಚಟುವಟಿಕೆ. ಇದು ದೇಶದ ಇತರ ಭಾಗಗಳಂತೆ ಈಶಾನ್ಯ ಭಾರತದಲ್ಲಿ ವ್ಯಾಪಕವಾಗಿತ್ತು. ಕಾರಣ ದಟ್ಟವಾದ ಕಾಡುಗಳು, ಗುಡ್ಡಬೆಟ್ಟಗಳ ತಪ್ಪಲು, ಕಣಿವೆಗಳಲ್ಲಿ ವಾಸಮಾಡುವ ಕಾರಣದಿಂದಾಗಿ ಭೌಗೋಳಿಕವಾಗಿ ಸಹ ನಾಡಿನ ಇತರ ಭಾಗಗಳೊಡನೆ ಇಲ್ಲಿನ ವನವಾಸಿ ಬುಡಕಟ್ಟು ಜನರಿಗೆ ಸಂಪರ್ಕ ಕಡಿದುಹೋಗಿತ್ತು.ಇಷ್ಟುಮಾತ್ರವಲ್ಲದೆ ಈ ವನವಾಸಿಗಳಲ್ಲೇ ಸುಮಾರು ೧೯೨ ರೀತಿಯ ಬುಡಕಟ್ಟುಗಳಿದ್ದವು. ಅವರ ಆಡುಭಾಷೆಗಳು, ವಾಸಿಸುವ ಪರಿಸರ ಎಲ್ಲವೂ ಬೇರೆ ಬೇರೆ. ಹೀಗಾಗಿ ಅವರೊಳಗೂ ಪರಸ್ಪರ ಸಂಪರ್ಕ ಇರಲಿಲ್ಲ. ಇವೆಲ್ಲದರ ಲಾಭ ಪಡೆದು, ಆಸೆ-ಆಮಿಷ, ಮೋಸಗಳಿಂದ ಸಾವಿರಾರು ಮಂದಿ ಬುಡಕಟ್ಟು ಜನರನ್ನು ಈ ಮತಾಂತರದ ಬಲೆಗೆ ಬೀಳಿಸುವುದರಲ್ಲಿ ಮಿಷನರಿಗಳು ಸಫಲವಾದವು.
ಈ ಕುತಂತ್ರದಿಂದಾಗಿ ಈಶಾನ್ಯ ಭಾರತದ ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ವನವಾಸಿ ಬುಡಕಟ್ಟು ಸಮುದಾಯದ ಜನರು ರಾಷ್ಟ್ರದ ಮುಖ್ಯಧಾರೆಯಿಂದ ತಾವು ಬೇರೆ ಎಂದು ಭಾವಿಸಲಾರಂಭಿಸಿದರು. ತಮ್ಮ ಪ್ರದೇಶಗಳನ್ನು ’ಸುರಕ್ಷಿತ ಪ್ರದೇಶ’ ಎಂದು ಘೋಷಿಸಿಕೊಂಡ ಅವರು ಕ್ರೈಸ್ತ ಮತಪ್ರಚಾರಕರನ್ನುಳಿದು ಬೇರೆಲ್ಲರಿಗೂ ಅಲ್ಲಿ ಪ್ರವೇಶವನ್ನು ನಿಷೇಧಿಸಿದರು.
 ಹೀಗೆ ನಾಗಾ ಜನಸಾಮಾನ್ಯರು ತಮ್ಮ ಮೂಲ ನಾಗಾ ಸಂಸ್ಕೃತಿಯಿಂದ ದೂರವಾಗುತ್ತಿರುವುದನ್ನು ಮನಗಂಡ ಜ಼ಾದೋನಾಂಗ್ ಎಂಬ ನಾಗಾಯುವಕನೊಬ್ಬ ಒಂದು ವ್ಯವಸ್ಥಿತ ಸಂಘಟಿತ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಸಮಯ ಕಾಯುತ್ತಿದ್ದ. ಬಾಲ್ಯದಲ್ಲಿಯೇ ವಿಶೇಷ ಪ್ರತಿಭಾವಂತೆ. ಬಡವರು, ನಿರ್ಗತಿಕರನ್ನು ಕಂಡರೆ ವಿಶೇಷ ಕರುಣೆ ಹೊಂದಿದ್ದ ಗಾಯಿಡಿನ್ ತನ್ನ ಸುತ್ತಮುತ್ತ ನಡೆಯುತ್ತಿರುವ ಚಟುವಟಿಕೆಗಳೆಲ್ಲ ಅನುಭವಕ್ಕೆ ಬರತೊಡಗಿತ್ತು. ಜ಼ಾದೋನಾಂಗ್‌ನ ಹೋರಾಟಗಳಲ್ಲಿ ಆಕರ್ಷಣೆ ಮೂಡಿ ೧೨ರ ಎಳೆಯ ವಯಸ್ಸಿನಲ್ಲಿಯೇ ಅವನ ಜೊತೆಗೂಡಿದಳು.
ಕೇವಲ ಮತಾಂತರದ ವಿರುದ್ಧದ ಹೋರಾಟ ಮಾತ್ರವಲ್ಲದೆ ವನವಾಸಿ ಪಂಗಡಗಳಲ್ಲಿ ಅವರ ಪರಿಶುದ್ಧ ಆಧ್ಯಾತ್ಮಿಕ-ಸಾಂಸ್ಕೃತಿಕ ಮೌಲ್ಯಗಳ ಪುನರುಜ್ಜೀವನದ ಕಾರ್ಯದ ಅನಿವಾರ್ಯತೆಯನ್ನು ಮನಗಂಡು ’ಹರಕ್ಕಾ’ (ಎಂದರೆ ’ಪರಿಶುದ್ಧ ಧರ್ಮ’) ಎಂಬ ಸಂಸ್ಥೆಯನ್ನು ರೂಪಿಸಿ, ನಾಗಾ ಸಂಸ್ಕೃತಿ, ಆಚಾರ-ವಿಚಾರಗಳ ಸಂರಕ್ಷಣೆಗೆ ಚಳವಳಿಯ ಸ್ವರೂಪ ನೀಡಿದರು. ನಾಗಾಗಳಲ್ಲಿರುವ ಪ್ರಮುಖ ಮೂರು ಪಂಗಡಗಳಾದ ಜಿಮಿ, ರೆಂಗ್‌ಮಾಯ್ ಮತ್ತು ಝೆಲಿಯಂಗ್ ಜನರನ್ನು ಒಗ್ಗೂಡಿಸಿ ’ಝೆಲಿಯಂಗ್‌ರಾಂಗ್’ ಎಂದು ನಾಮಕರಣಗೊಳಿಸಿ ಅವರನ್ನು ಒಗ್ಗೂಡಿಸಿದಳು. ಬ್ರಿಟಿಷ್ ಸರಕಾರ ಹಾಗೂ ಅವರ ಕೃಪಾಪೋಷಿತ ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ದೌರ್ಜನ್ಯಗಳ ಬಗೆಗೆ ಜನರಲ್ಲಿ ಅರಿವು ಮೂಡಿಸಿ, ಜನರನ್ನು ಒಗ್ಗೂಡಿಸಿದರು. ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಅಸ್ಸಾಂನ ಕಾಛಾರ್ ಜಿಲ್ಲೆಯ ಭುವನ್‌ಕೇವ್ ಯಾತ್ರೆಯೂ ಸೇರಿದಂತೆ ಹತ್ತಾರು ಧರ್ಮಯಾತ್ರೆಗಳನ್ನು ನಡೆಸಿದರು. ಅರಣ್ಯ ಪ್ರದೇಶಗಳು ಹಾಗೂ ಜನರ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಬ್ರಿಟಿಷರು ಹಳ್ಳಿಯ ಮೇಲೆ ವಿಧಿಸಿದ ವಿವಿಧ ರೀತಿಯ ತೆರಿಗೆಗಳನ್ನು ವಿರೋಧಿಸಿದರು.
ಗಾಯಿಡಿನ್-ಜ಼ಾದೋನಾಂಗ್‌ರನ್ನು ದೇವರ ಪ್ರತಿರೂಪ ಎಂದೇ ಆ ಭಾಗದ ಜನರು ಭಾವಿಸಿದರು. ಈ ಹೋರಾಟಕ್ಕೆ ಗಂಡಸರು ಮಾತ್ರವಲ್ಲದೆ ಹೆಂಗಸರೂ ಸಕ್ರಿಯರಾಗಬೇಕು ಎಂದು ಕರೆನೀಡಿದಳು. ಈ ಕರೆಗೆ ಓಗೊಟ್ಟು ನೂರಾರು ಮಹಿಳೆಯರು ಮುಂದೆ ಬಂದರು. ಅವರಿಗೆಲ್ಲ ಅಗತ್ಯ ತರಬೇತಿ ನೀಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಬಲ್ಲ ’ಮಹಿಳಾ ಸೈನ್ಯ’ವೊಂದನ್ನು ಕಟ್ಟಿದಳು.
  ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವ ಈ ಹೋರಾಟವನ್ನು ಹತ್ತಿಕ್ಕಲೇಬೇಕೆಂದು ನಿರ್ಧರಿಸಿದ ಬ್ರಿಟಿಷ್ ಸರಕಾರ ಮೋಸದಿಂದ ಜ಼ಾದೋನಾಂಗ್‌ನನ್ನು ಬಂಧಿಸಿ ದೇಶದ್ರೋಹದ ಆಪಾದನೆ ಹೊರಿಸಿ ೧೯೩೧ರ ಆಗಸ್ಟ್ ೨೯ರಂದು ನೆಣಿಗೇರಿಸಿತು. ಇದರಿಂದ ವಿಚಲಿತರಾಗದ ಗಾಯಿಡಿನ್ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ತನ್ನನ್ನು ’ನಾಗಾ ಕ್ರಾಂತಿದಳದ ನೇತಾ’ ಎಂದು ಘೋಷಿಸಿಕೊಂಡಳು. ಊರಿಂದೂರಿಗೆ ಪ್ರಯಾಣ ಬೆಳೆಸಿ, ದುಷ್ಟ, ಕ್ರೂರ, ಅಮಾನವೀಯ ವಿದೇಶೀ ಆಳ್ವಿಕೆಯನ್ನು ಕಿತ್ತೊಗೆಯಲು ಹಾಗೂ ದೇಶ-ಧರ್ಮದ ರಕ್ಷಣೆಗಾಗಿ ಝೆಲಿಯಂಗ್‌ರಾಂಗ್ ಯುವಕರು ಹಾಗೂ ಧೈರ್ಯವಂತ ಯುವತಿಯರು ಮುಂದೆಬಂದು ಸೈನ್ಯವನ್ನು ಸೇರುವಂತೆ ಹುರಿದುಂಬಿಸಿದಳು. ಅವಳಿಂದ ಪ್ರೇರಿತರಾಗಿ ಐದು ನೂರಕ್ಕೂ ಅಧಿಕ ಮಂದಿ ಅವಳೊಂದಿಗೆ ಬಂದರು. ಸ್ವತಃ ಮುಂದೆ ನಿಂತು ಬಂದೂಕು ಹಾಗೂ ಸಾಂಪ್ರದಾಯಿಕ ಮದ್ದುಗುಂಡುಗಳ ಚಲಾವಣೆ ಹಾಗೂ ಅವುಗಳ ತಯಾರಿಕೆಗಳ ಕುರಿತು ಅವರಿಗೆ ತರಬೇತಿ ನೀಡಿದಳು.
ಬ್ರಿಟಿಷ್ ಸೈನಿಕರ ವಿರುದ್ದ ಗೆರಿಲ್ಲಾ ರಣನೀತಿಯನ್ನು ಅನುಸರಿಸಿದಳು. ಹಠಾತ್ತಾಗಿ ಬ್ರಿಟಿಷರ ಬೃಹತ್ ಶಸ್ತ್ರಸಜ್ಜಿತ ಸೈನ್ಯದ ಮೇಲೆ ದಾಳಿಮಾಡಿ ಅವರನ್ನು ಹಾನಿಗೊಳಿಸಿ, ಗಾಢ ಅರಣ್ಯಗಳಲ್ಲಿ ಅದೃಶ್ಯವಾಗಿಬಿಡುತ್ತಿದ್ದರು. ಇವರನ್ನು ಅಟ್ಟಿಸಿಕೊಂಡು ಬಂದ ಬ್ರಿಟಿಷರಿಗೆ ದಾರಿ ತಪ್ಪಿಸುತ್ತಿದ್ದರು. ಎತ್ತರದ ಮರಗಳ ಮೇಲೆ ಬೊಂಬೆಗಳನ್ನು ಕೂರಿಸಿ, ಅದನ್ನು ಹಿಂಬಾಲಿಸಿದ ಬ್ರಿಟಿಷರು ವಾಸ್ತವ ತಿಳಿದು ಪರಿತಪಿಸುತ್ತಿದಾಗಲೇ ಅಚಾನಕ್ ದಾಳಿಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರು. ಈ ಎಲ್ಲ ಸಂದರ್ಭಗಳಲ್ಲೂ ತನ್ನ ಒಬ್ಬ ಸೈನಿಕನಿಗೂ ಹಾನಿಯಾಗದಂತೆ ಬಹಳ ಚತುರತೆಯಿಂದ ಯುದ್ಧತಂತ್ರಗಳನ್ನು ಹೆಣೆಯುತ್ತಿದ್ದಳು. ಈ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ, ಕೇವಲ ಏಳು ತಿಂಗಳುಗಳಲ್ಲೇ ಬ್ರಿಟಿಷ್ ಸೈನಿಕರು ಭಯದಿಂದ ತತ್ತರಿಸಿಹೋದರು. ಹೋರಾಟ ಕೇವಲ ಅಸ್ಸಾಂ, ನಾಗಾಲ್ಯಾಂಡ್, ಮಣಿಪುರಗಳಿಗಷ್ಟೇ ಸೀಮಿತವಾಗದೆ ಅನೇಕ ಹಳ್ಳಿಗಳಿಗೆ ವ್ಯಾಪಿಸಿತ್ತು. ಅನೇಕ ಗ್ರಾಮಗಳು ರಾಣಿಯ ಬೆಂಬಲಕ್ಕೆ ನಿಂತವು. ಮಿಷನರಿ ಚಟುವಟಿಕೆಗೆ ಜನರೇ ಸ್ವತಃ ಪ್ರತಿರೋಧ ನೀಡತೊಡಗಿದರು.
ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಅನೇಕ ಸರಕಾರಗಳು ಗಾಯಿಡಿನ್‌ಳನ್ನು ಬಂಧಿಸುವಂತೆ ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿದವು. ಈಗಲೇ ಆಕೆಯನ್ನು ಬಂಧಿಸದಿದ್ದಲ್ಲಿ ಮುಂದೆ ಘೋರ ವಿಪತ್ತನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದವು. ಬ್ರಿಟಿಷ್ ಸರಕಾರ ಇನ್ನು ಸುಮ್ಮನಿರಲು ಸಿದ್ಧರಿರಲಿಲ್ಲ. ಮಣಿಪುರ, ಅಸ್ಸಾಂನ ಉತ್ತರ ಕಾಛಾರ್, ಮಿಕಿರ ಪರ್ವತ ಹಾಗೂ ನಾಗಾ ಪರ್ವತ ಸೇರಿದಂತೆ ಅನೇಕ ಗ್ರಾಮಗಳಿಗೆ ಸೇನೆಯನ್ನು ಕಳುಹಿಸಿತು. ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು, ಹಳ್ಳಿಯ ಜನರು ಒಂದೆಡೆಯಿಂದ ಇನ್ನೊಂದು ಹಳ್ಳಿಗೆ ಹೋಗದಂತೆ ನಿರ್ಬಂಧಿಸಿತು. ಸಾರ್ವಜನಿಕ ಸ್ಥಳಗಳಲ್ಲಿ ಆಕೆಯ ಬಗೆಗೆ ಸುಳಿವು ನೀಡುವಂತೆ, ಸುಳಿವು ನೀಡಿದವರಿಗೆ ೨೦೦ ರೂಪಾಯಿಗಳ ಬಹುಮಾನವನ್ನೂ, ಹತ್ತು ವರ್ಷಗಳ ಕಾಲ ಸಂಪೂರ್ಣ ಗ್ರಾಮದ ಮನೆ ತೆರಿಗೆ ಸೇರಿದಂತೆ ವಿವಿಧ ಸುಂಕಗಳನ್ನು ಸಂಪೂರ್ಣ ಮನ್ನಾ ಮಾಡುವುದಾಗಿಯೂ ಘೋಷಿಸಿತು. ಕೆಲತಿಂಗಳ ನಂತರ ಬಹುಮಾನದ ಮೊತ್ತವನ್ನು ೪೦೦ ರೂ.ಗೆ ಏರಿಸಿತು. ಆದರೆ ಪ್ರಯೋಜನವಾಗಲಿಲ್ಲ.
ಗಾಯಿಡಿನ್‌ರ ಬಂಧನ ಅಸಾಧ್ಯವೆಂದೆನಿಸಿದಾಗ ತನ್ನ ಎಂದಿನ ವಾಮಮಾರ್ಗ ಹಿಡಿಯಿತು. ಅವಳ ಚಟುವಟಿಕೆಗಳ ಬಗ್ಗೆ ಮಾಹಿತಿಯಿರುವ ಆಕೆಯ ಆಪ್ತ ಡಾ|| ಹರಾಲುವಿಗೆ ಆಸೆ-ಆಮಿಷ ತೋರಿಸಿ ಬುಟ್ಟಿಗೆ ಹಾಕಿಕೊಂಡಿತು. ಪರಿಣಾಮವಾಗಿ ಹಂಗ್ರಾಮದಲ್ಲಿ ಈಶಾನ್ಯ ಭಾರತದ ಸ್ವಾತಂತ್ರ್ಯೇತಿಹಾಸದಲ್ಲಿ ಘನಘೋರವೆನ್ನಬಹುದಾದ ಕದನ ನಡೆದು ೧೨ ಅಕ್ಟೋಬರ್ ೧೯೩೨ರಂದು ಆಕೆಯನ್ನು ಬಂಧಿಸಿತು. ೪ ಮಣಿಪುರಿ ತಂಬಾಕು ವ್ಯಾಪಾರಿಗಳ ಹತ್ಯೆಯ ಮಿಥ್ಯಾರೋಪ ಹೊರಿಸಿ, ವಿಚಾರಣೆಯ ನಾಟಕವಾಡಿ ಜೀವಾವಧಿ ಶಿಕ್ಷೆ ವಿಧಿಸಿತು. ಆಗ ಗಾಯಿಡಿನ್‌ಳಿಗೆ ಕೇವಲ ಹದಿನಾರು ವರ್ಷ ವಯಸ್ಸು!
ರಾಣಿಯ ಪರವಾಗಿ ಬ್ರಿಟನ್ ಸರಕಾರದ ಮೇಲೆ ಒತ್ತಡ ತರುವಂತೆ ಕೋರಿ ನೆಹರು, ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‌ನ ಮೊದಲ ಮಹಿಳಾ ಸದಸ್ಯೆ ಲೇಡಿ ನಾನ್ಕೆ ಆಸ್ಟರ್‌ಗೆ ಪತ್ರಗಳನ್ನು ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದರು. ’ಗಾಯಿಡಿನ್ ಬಿಡುಗಡೆಗೊಂಡಲ್ಲಿ ನಾಗಾ ಜನಾಂಗದವರ ಹೋರಾಟ ತೀವ್ರಸ್ವರೂಪ ಪಡೆಯುತ್ತದೆ. ಮಾತ್ರವಲ್ಲದೆ ಈ ಹೋರಾಟ ಅಸ್ಸಾಂ ಹಾಗೂ ಮಣಿಪುರ ಪ್ರಾಂತದ ಇತರೆಡೆಗೂ ವಿಸ್ತರಿಸಿ, ಅಲ್ಲಿಯ ಶಾಂತಿಗೆ ಭಂಗತರುವ ಸಾಧ್ಯತೆಯಿರುವುದರಿಂದ ಆಕೆಯ ಬಿಡುಗಡೆ ಸಾಧ್ಯವಿಲ್ಲ’ ಎಂದು ಆಕೆ ಉತ್ತರಿಸಿದಳು. ೧೯೩೮ರಲ್ಲಿ ಸುಭಾಸ್‌ಚಂದ್ರ ಬೋಸ್ ಅಧ್ಯಕ್ಷತೆಯಲ್ಲಿ ಗುಜರಾತ್‌ನ ಹರಿಪುರದಲ್ಲಿ ನಡೆದ ಅಖಿಲ ಭಾರತೀಯ ೫೧ನೇ ಕಾಂಗ್ರೆಸ್ ಅಧಿವೇಶನದಲ್ಲಿಯೂ ರಾಣಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು. ಮಣಿಪುರದ ಮಣಿಪುರ್ ಮಹಾಸಭಾ ಕೂಡಾ ಬಿಡುಗಡೆಗೆ ಆಗ್ರಹಿಸಿತು. ಆದರೆ ಬ್ರಿಟಿಷ್‌ರಿಗೆ ಆಕೆಯ ಬಗ್ಗೆಗಿದ್ದ ಭಯವಿನ್ನೂ ಕಾಡುತ್ತಲೇ ಇತ್ತು.
೧೫ ವರ್ಷಗಳ ಸುದೀರ್ಘ ಸೆರೆಮನೆವಾಸದ ನಂತರ ಸ್ವಾತಂತ್ರ್ಯಪ್ರಾಪ್ತಿಯ ಜೊತೆಗೆ ೧೯೪೭ರಲ್ಲಿ ರಾಣಿಯ ಬಿಡುಗಡೆಯಾಯಿತು. ಆದರೆ ಆಕೆಗೆ ಪೂರ್ವಾಂಚಲದಲ್ಲಿ ಎಲ್ಲೆಂದರಲ್ಲಿಗೆ ಹೋಗಬಾರದೆಂಬ ಷರತ್ತು ವಿಧಿಸಿತು. ಕಾರಣ ನಾಗಾಲ್ಯಾಂಡ್, ಮಿಜೋರಾಂ, ಅಸ್ಸಾಂ ಕ್ಷೇತ್ರಗಳಲ್ಲಿ ಕ್ರೈಸ್ತ ಮಿಷನರಿಗಳ ಪ್ರಾಯೋಜಿತ ಮತಾಂತರ ಚಟುವಟಿಕೆ ನಿರಾತಂಕವಾಗಿ ಮುಂದುವರಿದಿತ್ತು. ಚರ್ಚ್ ಹಾಗೂ ನಿಷೇಧಿತ ನಾಗಾ ನ್ಯಾಷನಲ್ ಕೌನ್ಸಿಲ್(ಎನ್‌ಎನ್‌ಸಿ) ಜೊತೆಗೂಡಿ ನಾಗಾ ಜನಾಂಗದವರಿಗೆ ವಿವಿಧ ಆಸೆ-ಆಮಿಷಗಳನ್ನು ಒಡ್ಡಿ ಬಲವಂತವಾಗಿ ಕ್ರ್ರಿಶ್ಚಿಯನ್‌ರನ್ನಾಗಿ ಮತಾಂತರಗೊಳಿಸುತ್ತಿರುವುದರ ವಿರುದ್ಧ ಧ್ವನಿಯೆತ್ತಿದಳು. ನೆಹರು ಸರಕಾರಕ್ಕೆ ರಾಣಿಯ ಕೂಗು ಕೇಳಲಿಲ್ಲ. ಪುನಃ ಭೂಗತಳಾಗಿ ನಾಗಾ ಜನರ ಹಾಗೂ ಅವರ ಧಾರ್ಮಿಕ ರಕ್ಷಣೆಗೆ ಹೋರಾಟ ನಡೆಸಿದಳು. ಪ್ರತ್ಯೇಕ ನಾಗಾಲ್ಯಾಂಡ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟದ ವಿರುದ್ಧ ದನಿ ಎತ್ತಿದಳು. ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೊತ್ತಿ ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಸರಕಾರದ ನೆರವಿಗೆ ನಿಂತಳು. ಕೊನೆಗೆ ೧೯೬೪ರಲ್ಲಿ ಭಾರತ ಸರಕಾರ ಹಾಗೂ ಎನ್‌ಎನ್‌ಸಿ ನಡುವೆ ’ಕದನ ವಿರಾಮ’ ಒಪ್ಪಂದವಾದಾಗ ರಾಣಿ ಭೂಗತ ಚಟುವಟಿಕೆಯಿಂದ ಹೊರಬಂದು ಮುಖ್ಯವಾಹಿನಿಗೆ ಸೇರ್ಪಡೆಗೊಂಡಳು.
೧೯೭೯ರಲ್ಲಿ ಪ್ರಯಾಗದಲ್ಲಿ ನಡೆದ ವಿಶ್ವ ಹಿಂದು ಸಮ್ಮೇಳನಕ್ಕೆ ಆಗಮಿಸಿದ ಝೆಲಿಯಂಗ್‌ರಾಂಗ್ ಹರಕ್ಕಾ ಚಳವಳಿಯ ಮಹಾನಾಯಕಿ ನಾಗಾರಾಣಿ ಮಾ ಗಾಯ್‌ಡಿನ್, ತನ್ನ ಭಾವಪರ್ಣವಾದ ಪಟ್ಟ ಭಾಷಣದಲ್ಲಿ, ನಾಗಾಪ್ರಜೆಗಳು ಸೇರಿದಂತೆ, ಹಿಂದಿನ ಸ್ವಾತಂತ್ರ್ಯ ಹೋರಾಟಗಾರರು ಪರ್ವಾಂಚಲದಲ್ಲಿ ಮಾಡಿದ ಅಪಾರ ತ್ಯಾಗ ಬಲಿದಾನಗಳನ್ನು ಆಕೆ ತೆರೆದಿಟ್ಟರು. ವಿದೇಶೀ ಮಿಷನರಿಗಳು ನಮ್ಮ ಸ್ವಾತಂತ್ರ್ಯದ ಬೇರುಗಳನ್ನೇ ನಿಶ್ಶಬ್ದವಾಗಿ ಕೊರೆದುಹಾಕುತ್ತಿದ್ದಾರೆ. ಅವರ ಈ ಹಂಚಿಕೆಗಳನ್ನು ಹೊಸಕಿಹಾಕಲು ದೊಡ್ಡ ಸಂಖ್ಯೆಯಲ್ಲಿ ಹಿಂದುಧರ್ಮ ಪ್ರಚಾರಕರು ಪೂರ್ವಾಂಚಲ ಪ್ರದೇಶಗಳಿಗೆ ತುರ್ತಾಗಿ ತಲಪಬೇಕಾಗಿದೆ ಎಂದು ವಿನಂತಿಸಿಕೊಂಡರು.
  ಮುಂದೆ ಆಕೆ ಈಶಾನ್ಯ ಭಾರತದಲ್ಲಿ ಹಿಂದು ಜಾಗರಣದ ಆಂದೋಲನಕ್ಕೆ ಆಕೆಯೇ ಸ್ಫೂರ್ತಿದಾತೆಯಾಗಿ ನಿಂತರು. ರಾಷ್ಟ್ರೀಯ ಸಂಘಟನೆಗಳಾದ ವನವಾಸಿ ಕಲ್ಯಾಣ ಆಶ್ರಮ, ವಿಹಿಂಪ, ವಿದ್ಯಾಭಾರತಿಯಂತಹ ಸಂಘಟನೆಗಳ ಜೊತೆ ಗುರುತಿಸಿಕೊಂಡು, ಆ ಸಂಘಟನೆಗಳ ಕಾರ್ಯಕ್ಕೆ ಪ್ರೇರಕಶಕ್ತಿಯಾಗಿ ನಿಂತರು. ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿ ಗೋಳ್ವಲ್ಕರ್ ಅವರನ್ನು ೧೯೬೯ರಲ್ಲಿ ಭೇಟಿಮಾಡಿದರು. ’ಫ್ರೀಡಂ ಆಪ್ ರಿಲಿಜಿಯನ್ ಆಕ್ಟ್ - ೧೯೭೮’ ಹಾಗೂ ರಾಮಜನ್ಮಭೂಮಿ ಆಂದೋಲನಗಳನ್ನು ಬೆಂಬಲಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು ವಿಶೇಷ ಉಲ್ಲೇಖಾರ್ಹವಾಗಿದೆ.
 ತನ್ನ ಕೊನೆಯ ಎರಡು ದಶಕಗಳಲ್ಲಿ ದೇಶದಾದ್ಯಂತ ಪ್ರವಾಸ ಕೈಗೊಂಡು ದೇಶವಾಸಿಗಳಲ್ಲಿ ಹರಡಿದ್ದ ’ನಾಗಾಗಳು ಭಾರತ ವಿರೋಧಿಗಳು’ ಎಂಬ ಮನೋಭಾವವನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಸತತ ಜರ್ಜರಿತವಾಗಿದ್ದ ರಾಣಿ, ತಮ್ಮ ತವರೂರಾದ ಲಂಗ್‌ಕಾವ್‌ನಲ್ಲಿ ೧೭ ಫೆಬ್ರುವರಿ, ೧೯೯೩ರಲ್ಲಿ ತಮ್ಮ ೭೮ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.
ರಾಣಿಯ ಹೋರಾಟ ಈಶಾನ್ಯ ಭಾರತಕ್ಕೆ, ನಾಗಾ ಸಂಸ್ಕೃತಿಯ ರಕ್ಷಣೆಗೆ ಸೀಮಿತವಾಗಿರಲಿಲ್ಲ. ಆಕೆಯ ಹೋರಾಟದ ಕಲ್ಪನೆ ಸಮಗ್ರ ಭಾರತವನ್ನು ಒಳಗೊಂಡಿತ್ತು. ಇದನ್ನು ಗುರುತಿಸಿದ ಭಾರತ ಸರಕಾರ ಆಕೆಯನ್ನು ‘ಸ್ವಾತಂತ್ರ್ಯ ಹೋರಾಟಗಾರ್ತಿ’ ಎಂದು ಗುರುತಿಸಿ ೧೯೭೨ರಲ್ಲಿ ತಾಮ್ರಪತ್ರ ನೀಡಿ ಸನ್ಮಾನಿಸಿತು. ೧೯೬೬ರಲ್ಲಿ ಭಾರತೀಯ ಅಂಚೆ ಇಲಾಖೆ ’ರಾಣಿ ಗಾಯಿಡಿನ್ ಲೂ’ ಅವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಹೊರತಂದಿತು. ೧೯೮೨ರಲ್ಲಿ ದೇಶದ ಮೂರನೇ ಶ್ರೇಷ್ಠ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ನೀಡಿ ಗೌರವಿಸಿತು. ೧೯೯೬ರಲ್ಲಿ ಮರಣೋತ್ತರವಾಗಿ ’ಬಿರ್ಸಾ ಮುಂಡಾ’ ಪ್ರಶಸ್ತಿಯನ್ನು ನೀಡಿತು.
ಭಾರತೀಯ ಸ್ವಾತಂತ್ರ್ಯ ಸಂಘರ್ಷದ ಇತಿಹಾಸದಲ್ಲಿ ರಾಣಿಗೆ ಮಹತ್ತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮರಂತಹ ಅದ್ವಿತೀಯ ಹೋರಾಟಗಾರರ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಗಾಯಿಡಿನ್ ಲೂ.
- ವಿಜಯವಾಣಿ, ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟಿತ

Monday, 9 March 2015

ಮಕ್ಕಳನ್ನು ಓದಲು ಹಚ್ಚಿದ ಭಾರತ-ಭಾರತಿ ಯೋಜನೆ


``MªÉÄä gÉʰ£À°è ºÉÆÃUÀÄwÛzÉÝ. vÀ¯ÉvÀÄA§ AiÉÆÃZÀ£ÉUÀ¼ÀÄ. gÉʰ£À°è MAzÀÄ aPÀÌ ¸ÀA¸ÁgÀ. vÀAzÉvÁ¬ÄAiÀÄgÉÆA¢UÉ ªÀÄPÀ̼ÀÄ. QlQ¬ÄAzÀ ºÉÆgÀUÀqÉ £ÉÆÃqÀĪÀÅzÀÄ, ¸Àé®à DlªÁqÀĪÀÅzÀÄ, ZÉõÉÖ ªÀiÁqÀĪÀÅzÀÄ, D¬ÄvÀÄ. C£ÀAvÀgÀ ¨ÉøÀgÀ. PÉÆ£ÉUÉ aîUÀ¼À£ÀÄß PÉzÀQ, ¥ÀĸÀÛPÀUÀ¼À£ÀÄß ºÉÆgÀvÉUÉzÀªÀÅ, D ¥ÀÄmÁtÂUÀ¼ÀÄ. CªÀÅUÀ¼À°è vÀ°èãÀªÁzÀªÀÅ. §UɧUÉAiÀÄ §tÚ§tÚzÀ avÀæUÀ¼ÀÄ. CAzÀªÁV CZÁÑVzÀÝ D `PÁ«ÄPïì' ¥ÀĸÀÛPÀUÀ¼À°è D ªÀÄPÀ̼À ªÀÄ£À¸ÀÄì £ÁnºÉÆÃ¬ÄvÀÄ. ªÀÄAvÀæ ºÁQzÀAvÉ MAzÉÆAzÀÄ ¥ÀĸÀÛPÀ »rzÀÄ MAzÉÆAzÀÄ PÀAzÀªÀÄäUÀ¼ÀÄ PÀÆvÀªÀÅ.''
EzÀÄ E¢ÃUÀ MlÄÖ 610 ¥ÀĸÀÛPÀUÀ¼ÉÆA¢UÉ PÀ£ÀßqÀ ¥ÀæPÁ±À£À ¥Àæ¥ÀAZÀzÀ°è zÁR¯ÉAiÀÄ£Éßà ¸ÀȶֹzÀ `¨sÁgÀvÀ-¨sÁgÀw' ¸ÀgÀtÂAiÀÄ ªÀÄPÀ̼À ¥ÀĸÀÛPÀUÀ¼À gÀZÀ£É-¥ÀæPÀluÉUÉ ¥ÉæÃgÀuÉ MzÀVzÀ MAzÀÄ ¸ÀAzÀ¨sÀð; ºÉüÀĪÀªÀgÀÄ F §ÈºÀvï ¥ÀæPÁ±À£ÀzÀ ºÉÆuÉAiÀÄ£ÀÄß ¤ªÀð»¹zÀ ¨ÉAUÀ¼ÀÆj£À gÁµÉÆÖçÃvÁÜ£À ¥ÀjµÀvï£À CA¢£À ¥ÀæzsÁ£À PÁAiÀÄðzÀ²ð £ÀA. ªÀÄzsÀégÁªï CªÀgÀÄ. EzÀÄ ¸ÀĪÀiÁgÀÄ 45-50 ªÀµÀðUÀ¼À »A¢£À MAzÀÄ ¸ÀAzÀ¨sÀð. FUÀ EAvÀºÀ ¸ÀAzÀ¨sÀðªÀ£ÀÄß PÁtĪÀÅzÀÄ C¸ÁzsÀåªÀ®èªÁzÀgÀÆ PÀµÀÖ¸ÁzsÀåªÉAzÀÄ M¦àPÉÆ¼Àî¯ÉèÉÃPÀÄ. CzÀÄ PÀ£ÀßqÀzÀ PÀAzÀªÀÄäUÀ¼ÀÄ PÀ£ÀßqÀ ¥ÀĸÀÛPÀUÀ½UÉ ªÀÄÄV©zÀÄÝ NzÀÄwÛzÀÝ PÁ®. DUÀ EAVèµï ªÀiÁzsÀåªÀÄ ±Á¯ÉUÀ¼ÀÄ E®èªÉA§µÀÄÖ C¥ÀgÀÆ¥À. n« E£ÀÆß CªÀvÀj¹gÀ°®è; EAl£Éðmï, ªÉƨÉʯïUÀ¼ÀAvÀÆ EgÀ¯Éà E®è.
¨sÁgÀvÀ-¨sÁgÀw ¸ÀgÀtÂUÉ ¥ÉæÃgÀuÉ MzÀVzÀ E£ÉÆßAzÀÄ ¸ÀAzÀ¨sÀðªÀ£ÀÄß ºÉüÀĪÀ ªÀÄzsÀégÁªï, ``£Á£ÉƧ⠤vÀå¥ÀæªÁ¹. ¨ÉAUÀ¼ÀÆjUÉ §AzÁUÀ ±ÀAPÀgÀ¥ÀÄgÀzÀ°ègÀĪÀ PÉñÀªÀPÀÈ¥ÁzÀ°è EgÀÄwÛzÉÝ. ¤vÀå ¨É¼ÀUÉÎ C°ègÀĪÀªÀgÉ®è ¸ÉÃj ¥ÁævÀB¸ÀägÀuÉ JA§ ±ÉÆèÃPÀUÀ¼À£ÀÄß ºÉüÀĪÀÅzÀÄ ªÁrPÉ. EzÀ£ÀÄß ºÉüÀĪÁUÀ £ÀªÀÄä zÉñÀzÀ°è DVºÉÆÃzÀ £ÀÆgÁgÀÄ ªÀĺÁªÀåQÛUÀ¼À ºÉ¸ÀgÀÄUÀ¼ÀÄ §gÀÄvÀÛªÉ. DUÀ CªÀgÀ£ÀÄß PÀÄjvÀÄ D¯ÉÆÃZÀ£É §gÀÄwÛvÀÄÛ. CªÀgÀÄUÀ¼ÀÄ AiÀiÁgÀÄ? CªÀgÀ ¸ÀägÀuÉ KPÉ? J°è ºÀÄnÖzÀgÀÄ? K£ÉãÀÄ ªÀiÁrzÀgÀÄ? ªÉÆzÀ¯ÁzÀ £ÀÆgÁgÀÄ ¥Àæ±ÉßUÀ¼ÀÄ vÀ¯ÉvÀÄA§ vÀÄA§ÄwÛzÀݪÀÅ'' J£ÀÄßvÁÛgÉ. eÉÆvÉUÉ ``CªÀgÉ®ègÀ£ÀÆß PÀÄjvÀÄ MAzÉÆAzÀÄ ¥ÀĸÀÛPÀ §gÉzÀgÉ? C¨Áâ, §®Ä PÀµÀÖ. «ªÀgÀUÀ¼À£ÀÄß ºÀÄqÀÄQ ¸ÀªÀÄUÀæªÁV UÀæAxÀ gÀa¸ÀĪÀÅzÀÄ...... PÀµÀÖ! C£ÉÃPÀ zÀ±ÀPÀUÀ¼À PÉ®¸À. £ÀÆgÁgÀÄ d£À PÀÆr ªÀiÁqÀĪÀ PÉ®¸À...... ºÁUÁzÀgÉ ªÀÄÄAzÉ? D¯ÉÆÃZÀ£ÉAiÀÄ zÀÄA© PÉÆgÉAiÀÄÄvÀÛ¯Éà ºÉÆÃ¬ÄvÀÄ'' JAzÀÆ ºÉüÀÄvÁÛgÉ.

                 AiÉÆÃd£ÉAiÀÄ°è «µÀAiÀÄ ªÉÊ«zsÀå
¥Àæw wAUÀ¼ÀÄ ºÀvÀÄÛ ¥ÀĸÀÛPÀUÀ¼À£ÀÄß ¥ÀæPÀn¸ÀĪÁUÀ CzÀgÀ®Æè ªÉÊ«zsÀå EgÀ¨ÉÃPÉAzÀÄ ¨sÁgÀvÀ-¨sÁgÀwAiÀÄ ¸ÀA¥ÁzÀPÀgÀÄ ¤zsÀðj¹ CzÀ£ÀÄß ¥Á°¹zÀÝgÀÄ. CzÀjAzÁV 510 ¥ÀĸÀÛPÀUÀ¼ÀÄ ¥ÀæPÀlUÉÆAqÀÄ ªÀÄPÀ̼À PÉÊUÉ ¸ÉÃgÀĪÀ ºÉÆwÛUÉ §ºÀÄzÉÆqÀØ ªÉÊ«zsÀåªÉà E°è ¸ÁPÁgÀªÁVvÀÄÛ. «ªÀgÀ »ÃVzÉ. IĶ-ªÀÄĤUÀ¼ÀÄ 12, ¥ÀÄgÁt ¥ÀÄgÀĵÀgÀÄ 28, ¸ÁzsÀĸÀAvÀgÀÄ 55, DZÁAiÀÄðgÀÄ 18, «ÃgÀ¨Á®PÀgÀÄ 9, DzsÀĤPÀ ªÀĺÁ¥ÀÄgÀĵÀgÀÄ 110, PÁæAwPÁgÀgÀÄ 30, «eÁÕ¤UÀ¼ÀÄ 18, ¸Á»w-PÀ¯ÉÆÃ¥Á¸ÀPÀgÀÄ 136 ºÁUÀÆ QæÃqÁ¥ÀlÄUÀ¼ÀÄ 18. ªÀÄPÀ̼À PÉÊUÉ PÉÆqÀĪÀ ¸Á»vÀå C¢üPÀÈvÀªÀÇ DVgÀ¨ÉÃPÉAzÀÄ ¸ÀA¥ÁzÀPÀgÀÄ JZÀÑgÀªÀ»¹zÀ PÁgÀt AiÀiÁgÀÄ ¨ÉÃPÁzÀgÀÆ EªÀÅUÀ¼À£ÀÄß zÁR¯ÉAiÀiÁV G¯ÉèÃT¸À§ºÀÄzÁVzÉ.

«µÀAiÀĪÀ£ÀÄß ¥ÀjµÀvï£À CA¢£À ¥ÀæzsÁ£À ªÀåªÀ¸ÁÜ¥ÀPÀ ªÉÄÊ.ZÀ. dAiÀÄzÉêÀ ºÁUÀÆ PÁAiÀÄðzÀ²ð CgÀPÀ° £ÁgÁAiÀÄuï CªÀgÀ°è ¥Àæ¸ÁÛ«¹zÀgÀÄ. ¥ÀjµÀvïUÉ DUÀ E£ÀÆß LzÁgÀÄ ªÀµÀðUÀ¼ÁVzÀݪÀµÉÖ. AiÉÆÃd£ÉUÉ §ºÀÄzÉÆqÀØ ªÉÆvÀÛ ¨ÉÃPÉAzÀÄ UÉÆvÀÄÛ. J°èAzÀ, ºÉÃUÉ §gÀĪÀÅzÉAzÀÄ UÉÆwÛ®è. DzÀgÀÆ PÁAiÀiÁðgÀA¨sÀ ªÀiÁrAiÉÄélÖgÀÄ. AiÉÆÃd£ÉUÉ PÀ£ÀßqÀzÀ ¥Àæ¹zÀÞ «ªÀıÀðPÀ, «zÁéA¸À ¥ÉÆæ|| J¯ï.J¸ï. ±ÉõÀVjgÁAiÀÄgÀÄ ¥ÀæzsÁ£À ¸ÀA¥ÁzÀPÀgÁV zÉÆgÉvÀzÀÄÝ CzÀȵÀÖªÉAzÉà ºÉüÀ¨ÉÃPÀÄ. `EzÀÄ DUÀ¨ÉÃPÁzÀ PÉ®¸À' JAzÀÄ M¦àPÉÆAqÀÄ PÁAiÀÄð¥ÀæªÀÈvÀÛgÁzÀ ¥ÉÆæ|| gÁªï ¤gÀAvÀgÀ ¸ÀĪÀiÁgÀÄ JAlÄ ªÀµÀðUÀ¼À PÁ® (vÀÄvÀÄð¥Àj¹ÜwAiÀÄ ¸ÀĪÀiÁgÀÄ MAzÀÄ ªÀµÀðªÀ£ÀÄß ºÉÆgÀvÀÄ¥Àr¹) ©qÀÄ«®èzÀ vÀªÀÄä ZÀlĪÀnPÉUÀ¼À ªÀÄzsÉåAiÀÄÆ, EzÀPÉÌ PÁ¯ÁªÀPÁ±À ªÀiÁrPÉÆAqÀgÀÄ; ¸ÀªÀÄxÀð £ÁAiÀÄPÀvÀé ¤Ãr ªÀÄÄ£ÀßqɹzÀgÀÄ; ºÀUÀ°gÀļÀÄ EzÀPÁÌV zÀÄrzÀgÀÄ. ¥ÀĸÀÛPÀ aPÀÌzÁzÀgÀÆ UÀÄtªÀÄlÖ ªÉÄïÉAiÉÄà EgÀĪÀAvÉ £ÉÆÃrPÉÆAqÀgÀÄ; Erà vÀAqÀ UÀrAiÀiÁgÀzÀ ªÀÄĽî£ÀAvÉ PÉ®¸À ªÀiÁr DgÀƪÀgÉ ªÀµÀðUÀ¼À°è 510 ¥ÀĸÀÛPÀUÀ¼ÀÄ ¥ÀÄmÁtÂUÀ¼À PÉʸÉÃjzÀªÀÅ; ¸ÁªÀiÁ£ÀåªÁV ªÉÆzÀ®¸À®ªÉà ªÀÄÄ¢æ¸ÀÄwÛzÀÝ ¥ÀæwUÀ¼ÀÄ 20 ¸Á«gÀ. ªÉÆzÀ® ºÀAvÀzÀ 510 ¥ÀĸÀÛPÀUÀ¼ÀÄ ªÀÄÄVAiÀÄĪÀ ºÉÆwÛUÉ ¸ÀĪÀiÁgÀÄ MAzÀÄ PÉÆÃnUÀÆ C¢üPÀ ¥ÀæwUÀ¼ÀÄ ªÀÄÄzÀætUÉÆArzÀݪÀÅ.

                       ¥ÀæPÀluÉ ¤°è¹zÀ vÀÄvÀÄð¥Àj¹Üw
510 ¥ÀĸÀÛPÀUÀ¼À AiÉÆÃd£ÉAiÀÄ£ÀÄß LzÀÄ ªÀµÀðUÀ¼À°è ªÀÄÄPÁÛAiÀÄUÉÆ½¸À¨ÉÃPÉ£ÀÄߪÀÅzÀÄ ¨sÁgÀvÀ-¨sÁgÀw §¼ÀUÀzÀ ¸ÀAPÀ®àªÁVvÀÄÛ. DzÀgÉ vÀÄvÀÄð¥Àj¹Üw CzÀgÀ°è KgÀÄ¥ÉÃgÀÄ GAlĪÀiÁrvÀÄ. K¦æ¯ï 6, 1976gÀAzÀÄ gÁµÉÆÖçÃvÁÜ£À ¥ÀjµÀvïUÉ ©ÃUÀªÀÄÄzÉæ ©vÀÄÛ. CzÀjAzÁV ¤AiÀÄ«ÄvÀªÁV ¥ÀæPÀlªÁUÀÄwÛzÀÝ ¨sÁgÀvÀ-¨sÁgÀw ¤AwvÀÄ. J®è C¸ÀÛªÀå¸ÀÛªÁV AiÉÆÃd£É JAlÄ ªÀµÀðPÉÌ «¸ÀÛj¹vÀÄ. 1977gÀ ªÀiÁZïð£À°è ¥ÀjµÀvï ¨ÁV®Ä vÉgÉzÁUÀ ®PÁëAvÀgÀ gÀÆ¥Á¬Ä £ÀµÀÖ; AiÉÆÃd£ÉAiÀÄ CZÀÄÑªÉÆ¼ÉUÀ¼ÀÄ £Á±ÀªÁVzÀݪÀÅ. ªÀÄvÉÛ ¥ÀæPÀluÉ DgÀA©ü¸ÀĪÁUÀ PÁUÀzÀ, gÀlÄÖ, ªÀÄÄzÀæt ¸ÁªÀÄVæUÀ¼À ¨É¯É UÀUÀ£ÀPÉÌÃjvÀÄÛ. DzÀgÀÆ ¥ÀĸÀÛPÀzÀ ¨É¯É Kj¸À¨ÁgÀzÉAzÀÄ ¸ÀA¸ÉÜ ªÉÆzÀ°£À ¨É¯ÉAiÀÄ£Éßà G½¹PÉÆArvÀÄ.


¥ÀĸÀÛPÀUÀ¼À UÁvÀæ aPÀÌzÉÃ. ¸ÀĪÀiÁgÀÄ 3,000 ¥ÀzÀUÀ¼ÀÄ; CAzÀgÉ MAzÀÄ zÉÆqÀØ ¯ÉÃR£ÀzÀµÀÄÖ JAzÀgÀÆ ¸À®ÄèvÀÛzÉ. DzÀgÉ CzÀPÁÌV ªÀ»¹zÀ JZÀÑgÀ, «µÀAiÀÄ ¸ÀAUÀ滸À®Ä ¥ÀlÖ ±ÀæªÀÄ, PÉ®ªÀÅ ªÀµÀð ¥Àæw wAUÀ¼ÀÄ ºÀvÀÄÛ ¥ÀĸÀÛPÀUÀ¼ÀAvÉ ¥ÀæPÀn¸À®Ä vÉÆÃjzÀ ¤µÉ× C¥ÀƪÀðªÁzÀzÀÄÝ. ``MAzÀÄ ©VAiÀiÁzÀ ZËPÀnÖ£À°è PÉ®¸À ªÀiÁqÀ®Ä ¸ÀA¥ÁzÀPÀ ªÀÄAqÀ½ ªÉÆzÀ¯Éà ¤zsÀðj¹vÀÄÛ. ¥Àæw ¥ÀĸÀÛPÀzÀ°è NzÀ®Ä £À®ªÀvÀÄÛ ¥ÀÄlUÀ¼À ¸ÁªÀÄVæ EgÀ¨ÉÃPÀÄ (¥ÀÄl aPÀÌzÀÄ, CPÀëgÀ zÉÆqÀØzÀÄ), ªÀÄzsÀåzÀ JgÀqÀÄ ¥ÀÄlUÀ¼À£ÀÄß vÀÄA§ÄªÀ avÀæ EgÀ¨ÉÃPÀÄ (ªÀÄvÉÛgÀqÀÄ MAzÉÆAzÀÄ ¥ÀÄlzÀ avÀæUÀ¼ÀÄ), ¥ÀĸÀÛPÀUÀ¼À PÀAw£À°è ªÉÊ«zsÀå EgÀ¨ÉÃPÀÄ, ªÉÆzÀ¯Éà ¤zsÀðj¹zÀ ¢£ÁAPÀUÀ¼À°è ©qÀÄUÀqÉAiÀiÁUÀ¨ÉÃPÀÄ - EAvÀºÀ «µÀAiÀÄUÀ¼À£ÀÄß £ÀªÀÄUÉ £ÁªÉà ¸ÀàµÀÖªÀiÁrPÉÆArzÉݪÀÅ. EzÀjAzÀ £ÀªÀÄä PÉ®¸ÀPÉÌ ²¸ÀÄÛ §A¢vÀÄÛ. ¥ÀĸÀÛPÀzÀ ªÀ¸ÀÄÛ, ¤gÀÆ¥ÀuÉ, ¨sÁµÉ EªÀ£ÀÄß PÀÄjvÀÆ ¸ÀàµÀÖ ¸ÀÆvÀæUÀ½zÀݪÀÅ. QÃwðPÁAiÀÄgÁzÀªÀgÀ£ÀÄß PÀÄjvÀÄ ªÀiÁvÀæ ¥ÀĸÀÛPÀ §gɸÀĪÀÅzÀÄ; ¨sÁµÉ ¸ÀgÀ¼ÀªÁVgÀ¨ÉÃPÀÄ; 10-12 ªÀµÀðzÀ ªÀÄPÀ̼ÀÄ »jAiÀÄgÀ £ÉgÀªÀ£ÀÄß PÉÆÃgÀzÉ NzÀ®Ä ¸ÁzsÀåªÁUÀ¨ÉÃPÀÄ; CAQUÀ¼ÀÄ, «ªÀgÀUÀ¼ÀÄ EªÀ£Éß vÀÄA© ¥ÀĸÀÛPÀªÀ£ÀÄß zÁR¯ÉAiÀÄ£ÁßV ªÀiÁqÀzÉ, PÀÈwAiÀÄ £ÁAiÀÄPÀgÀ ªÀåQÛvÀézÀ WÀ£ÀvÉ, ¸ÁzsÀ£ÉAiÀÄ ªÀĺÀvÀÛ÷é EªÀ£ÀÄß ¤gÀƦ¸À¨ÉÃPÀÄ. ¥ÀªÁqÀUÀ½UÉ CªÀPÁ±À E®è. ¥Àæw «ªÀgÀPÀÆÌ DzsÁgÀ«gÀ¨ÉÃPÀÄ...... fêÀ£ÀzÀ J®è PÉëÃvÀæUÀ¼À°è »jªÉÄ ¸Á¢ü¹zÀªÀgÀ£ÀÄß ªÀiÁ¯ÉAiÀÄ°è ¥ÀjZÀ¬Ä¸À¨ÉÃPÀÄ'' JA§ÄzÁV ¥ÉÆæ|| ±ÉõÀVjgÁªï F PÁAiÀÄðªÀ£ÀÄß £ÉgÀªÉÃj¹zÀ jÃwAiÀÄ£ÀÄß MAzÉqÉ ºÉýzÁÝgÉ. ªÀÄPÀ̼À£ÀÄß UÀªÀÄ£ÀzÀ°èj¹PÉÆAqÀÄ ¥ÀĸÀÛPÀ ªÀiÁqÀĪÀªÀgÀÄ EA¢UÀÆ ªÀiÁUÀðzÀ²ðAiÀiÁV F CA±ÀUÀ¼À£ÀÄß C£ÀĸÀj¸À§ºÀÄzÀÄ JAzÀgÉ vÀ¥Àà®è.
PÉ®¸ÀzÀ £ÀqÀÄªÉ vÀªÀÄä ªÀÄÄAzÉ §AzÀ vÉÆqÀPÀÄUÀ¼À£ÀÄß ¤ªÁj¹PÉÆ¼ÀÄîvÁÛ ¸ÀA¥ÁzÀQÃAiÀÄ ªÀÄAqÀ½ ªÀÄÄAzÉ ¸ÁVvÀÄ. ¯ÉÃRPÀjAzÀ ºÀ¸ÀÛ¥Àæw §gÀÄvÀÛ¯Éà ¥ÀzÀUÀ¼À ¸ÀASÉåAiÀÄ ¯ÉPÁÌZÁgÀ (3,000zÀ «Äw¥Á®£ÉUÁV), §½PÀ ºÉ¸ÀgÀÄUÀ¼ÀÄ, ªÀµÀðUÀ¼ÀÄ, WÀl£ÉUÀ¼ÀÄ J®èªÀ£ÀÆß DzsÁgÀ UÀæAxÀUÀ¼À £ÉgÀ«¤AzÀ vÁ¼É£ÉÆÃqÀĪÀÅzÀÄ, ªÀåvÁå¸ÀUÀ½zÀÝgÉ UÀÄgÀÄvÀÄ ºÁQ ¥ÀæzsÁ£À ¸ÀA¥ÁzÀPÀgÀ UÀªÀÄ£ÀPÉÌ vÀgÀĪÀ PÉ®¸ÀªÀ£ÀÄß eÉ. ªÀÄzsÀĸÀÆzÀ£À, ¸ÉÆÃªÀÄ£ÁxÀ £ÁAiÀÄPï, UÀ.PÀÈ. ªÉAPÀmÉñÀªÀÄÆwð, J.J¸ï. £ÀlgÁeï ªÉÆzÀ¯ÁzÀªÀgÀÄ £ÉgÀªÉÃj¹zÀgÀÄ. FUÀ `wgÀÄzÁ¸À' J¤¹gÀĪÀ ²æÃ wgÀÄ CxÀªÁ JA.L. wgÀÄ£ÁgÁAiÀÄt CAiÀÄåAUÁAiÀÄðgÀAvÀÆ ¨sÁgÀvÀ-¨sÁgÀwAiÀÄ DvÀäzÀAvÉ PÉ®¸À ªÀiÁrzÀªÀgÀÄ.
F PÉ®ªÀgÀÄ N¢zÀ £ÀAvÀgÀ ºÀ¸ÀÛ¥Àæw ¥ÀæzsÁ£À ¸ÀA¥ÁzÀPÀgÀ PÉÊUÉ. CzÀ£ÀÄß N¢, CUÀvÀåªÁzÀ UÁvÀæPÉÌ ¸Àj¥Àr¹, G¥À²Ã¶ðPÉUÀ¼À£ÀÄß PÉÆlÄÖ Erà ¥ÀĸÀÛPÀzÀ ¸ÀégÀÆ¥À-¸ÁxÀðPÀåUÀ¼À PÀqÉUÉ UÀªÀÄ£À PÉÆqÀ¨ÉÃPÁzÀªÀgÀÄ, avÀæUÀ¼À£ÀÄß ¸ÀÆa¸ÀĪÀªÀgÀÄ CªÀgÀÄ. CUÀvÀåªÁzÀ ¥ÀĸÀÛPÀUÀ¼À£ÀÄß, «ªÀgÀUÀ¼À£ÀÄß MzÀV¸ÀĪÀÅzÀÄ, C¤ªÁAiÀÄðªÁzÀ ªÀiÁ»wAiÀÄ£ÀÄß JµÉÖà PÀµÀÖ¥ÀmÁÖzÀgÀÆ ¸ÀAUÀ滸ÀĪÀÅzÀÄ PÀÆqÀ ¸ÀA¥ÁzÀQÃAiÀÄ §¼ÀUÀzÀ UɼÉAiÀÄgÀ PÉ®¸À. MªÉÄä »ÃUÁ¬ÄvÀÄ: PÀªÀįÁ £ÉºÀgÀÄ CªÀgÀ PÀÄjvÀÄ ¥ÀĸÀÛPÀªÀ£ÀÄß ¹zÀÞ¥Àr¹ ªÀÄÄzÀætPÉÌ PÉÆqÀĪÀµÀÖgÀ°è CªÀgÀ vÀAzÉAiÀÄ ºÉ¸Àj£À §UÉÎ ¸ÀAzÉúÀ §AvÀÄ. ¥ÀĸÀÛPÀUÀ¼À£ÀÄß ¥Àj²Ã°¹zÁUÀ ¨ÉÃgÉ ¨ÉÃgÉ ºÉ¸ÀgÀÄUÀ¼ÀÄ §AzÀªÀÅ. DUÀ CA¢£À ¥ÀæzsÁ¤ EA¢gÁ UÁA¢ü CªÀjUÉà vÀAw PÀ¼ÀÄ»¹zÀgÀÄ. ¥ÀæzsÁ¤ PÀbÉÃj¬ÄAzÀ GvÀÛgÀ §AvÀÄ; CzÀgÀAvÉ ¸Àj¥Àr¹ ¥ÀĸÀÛPÀzÀ ªÀÄÄzÀæt £ÀqɬÄvÀÄ. 
  F §ÈºÀvï AiÉÆÃd£ÉUÉ ºÀt ºÉÆA¢¸ÀĪÀÅzÀÄ PÀµÀÖªÁzÁUÀ LzÀÄ ªÀµÀðUÀ¼À oÉêÀtÂAiÀÄ MAzÀÄ AiÉÆÃd£ÉAiÀÄ£ÀÄß gÀƦ¹zÀgÀÄ. CzÀgÀAvÉ ºÀt ElÖªÀjUÉ ±ÉÃ. 6.25 zÀgÀzÀ §rØ ªÀÄvÀÄÛ ¨sÁgÀvÀ- ¨sÁgÀw ¥ÀĸÀÛPÀUÀ¼À GavÀ ¤ÃrPÉ. CzÀPÀÆÌ d£À ¸ÀàA¢¹ 7.40 ®PÀë gÀÆ. ¸ÀAUÀæºÀªÁ¬ÄvÀÄ; oÉêÀtÂzÁgÀgÀÄ 659 ªÀÄA¢. CAzÀÄ F ªÉÆvÀÛ zÉÆqÀØzÉà DVvÀÄÛ. F ºÀtzÀ ¸ÀAUÀæºÀzÀ°è ±Àæ«Ä¹zÀ PÉÆ.gÁ. gÁdUÉÆÃ¥Á¯ï, ªÀÄÄzÀætzÀ §ÈºÀvï PÉ®¸À ¥ÀÆgÉʹzÀ ªÀÄAZÀ£À¨É¯É gÁWÀªÉÃAzÀæ ªÀÄvÀÄÛ ¹§âA¢, PÀ¯Á«zÀgÁzÀ `²æÃ', PÉ.JA. ZÀAzÀæªÀÄÆwð, PÉ. UÀuÉñÀ DZÁAiÀÄð, ©.JA. ªÉAPÀmÉÃ±ï ªÀÄÄAvÁzÀªÀgÉ®è CA¢£À 510 ¥ÀĸÀÛPÀUÀ½UÉ ±ÁèWÀ¤ÃAiÀÄ ¸ÉÃªÉ ¸À°è¹zÀÝgÀÄ. GzÀå«Ä, ¥ÀjµÀvï£À CzsÀåPÀë JA. UÉÆÃ«AzÀgÁªï ªÀÄPÀ̽UÉ F ¥ÀĸÀÛPÀUÀ¼À£ÀÄß GavÀªÁVAiÉÄ ºÀAazÀÝgÀÄ.
CUÀ°zÀªÀgÀ §UÉUÉ ªÀiÁvÀæ ¥ÀĸÀÛPÀ gÀZÀ£É ¨sÁgÀvÀ-¨sÁgÀw ºÁQPÉÆAqÀ ZËPÀlÄÖ; 3-4 zÀ±ÀPÀUÀ¼ÀÄ PÀ¼ÉAiÀÄĪÀµÀÖgÀ°è gÁµÉÆÖçÃvÁÜ£À §¼ÀUÀPÉÌ E£ÉߵɯÖà ªÀÄA¢ D ¸Á°UÉ ¸ÉÃgÀ¨ÉÃPɤ¹vÀÄ. CzÀPÁÌV JgÀqÀ£Éà ¸ÀgÀtÂAiÀÄ£ÀÄß DgÀA©ü¸À¯Á¬ÄvÀÄ. F ¸ÀgÀtÂUÉ ¯ÉÃRPÀ-¥ÀvÀæPÀvÀð `agÀAfë' CªÀgÀÄ ¥ÀæzsÁ£À ¸ÀA¥ÁzÀPÀgÀÄ. F ¸ÀgÀtÂAiÀÄ ªÉÆzÀ® PÀAw£À 50 ¥ÀĸÀÛPÀUÀ¼ÀÄ FUÁUÀ¯É £Ár£À ªÀÄPÀ̼À PÉʸÉÃjªÉ. JgÀqÀ£Éà PÀAw£À 50 ¥ÀĸÀÛPÀUÀ¼ÀÄ EzÉà ªÀiÁZïð 8gÀAzÀÄ ¯ÉÆÃPÁ¥ÀðuÉUÉÆ¼ÀÄîwÛªÉ. F ¸ÀgÀtÂUÀÆ »A¢£À ¸ÀgÀtÂAiÉÄà DzÀ±ÀðªÁVzÀÄÝ, ¥ÀĸÀÛPÀUÀ¼ÀÄ §ºÀÄvÉÃPÀ CzÉà §UÉAiÀÄ°è ¹zÀÞªÁVªÉ. E¢ÃUÀ ¯ÉÆÃPÁ¥ÀðuÉUÉÆ¼ÀÄîwÛgÀĪÀ ¥ÀĸÀÛPÀUÀ¼À°è UÉÆgÀÆgÀÄ gÁªÀĸÁé«Ä CAiÀÄåAUÁgï, qÁ|| gÁdPÀĪÀiÁgï, ¦.©. ²æÃ¤ªÁ¸ï, ºÀgÀ¥À£ÀºÀ½î ©üêÀĪÀé, ¸À°ÃA C°, J.©. ±ÉnÖ, ±ÀPÀÄAvÀ¯ÁzÉë, ¥ÀArvï gÀ«±ÀAPÀgï, §¸ÀªÀgÁd gÁdUÀÄgÀÄ, PÉAUÀ¯ï ºÀ£ÀĪÀÄAvÀAiÀÄå, ©¹ä¯Áè SÁ£ï, ¨É£ÀUÀ¯ï £ÀgÀ¹AUÀgÁªï, UËjñÀ PÁ¬ÄÌt ªÀÄÄAvÁzÀªÀÅ ¸ÉÃjªÉ. 
-    JZï. ªÀÄAdÄ£ÁxÀ ¨sÀmï




Wednesday, 13 August 2014

50ರ ಸಂಭ್ರಮ : ಸೇವೆ ಮತ್ತು ಸಂಘಟನೆಯ ಹಾದಿಯಲ್ಲಿ ವಿಶ್ವ ಹಿಂದು ಪರಿಷತ್

50gÀ  ¸ÀA¨sÀæªÀÄ
¸ÉÃªÉ ªÀÄvÀÄÛ ¸ÀAWÀl£É ºÁ¢AiÀÄ°è «±Àé »AzÀÄ ¥ÀjµÀvï
ವಿಶ್ವ ಹಿಂದೂ ಪರಿಷತ್ ಎಂದರೆ ಹೋರಾಟಗಾರರ ಗುಂಪು, ಗೋಂಡಾಗಳು ಎಂಬಂತೆ ಸಮಾಜದಲ್ಲಿ ಬಿಂಬಿಸಲಾಗುತ್ತಿದೆ. ಆದರೆ ವಿಶ್ವ ಹಿಂದು ಪರಿಷತ್ ಹಿಂದುಗಳ ರಕ್ಷಣೆಗೆ ಕಂಕಣ ಕಟ್ಟಿನಿಂತಿರುವ ಸಂಘಟನೆ.  ಇಷ್ಟು ಮಾತ್ರವಲ್ಲದೇ ಸಾವಿರಾರು  ಸೇವಾ ಚಟುವಟಿಕೆಗಳನ್ನು ಹಾಗೂ ಸಾಮಾಜಿಕ ಕಳಹಳಿಯ ಹಿಂದೂ ಹೆಲ್ಪ್ ಲೈನ್, ಇಂಡಿಯಾ ಹೆಲ್ತ್ ಲೈನ್ ಗಳ ಸೇವೆ ವಿಹಿಂಪ ಕಡೆಯಿಂದ ನಡೆಯುತ್ತಿದೆ. ಬಗೆಗೆ ಒಂದು ಸಂಕ್ಷಿಪ್ತ ನೋಟ
  
 ¨sÁgÀvÀªÀÇ ¸ÉÃjzÀAvÉ dUÀwÛ£ÁzÀåAvÀ ªÁ妹gÀĪÀ »AzÀÆUÀ¼À ºÁUÀÆ »AzÀÆ ¸ÀA¸ÀÌøwAiÀÄ gÀPÀëuÉUÁV 1964gÀ ²æÃPÀȵÁÚµÀÖ«ÄAiÀÄAzÀÄ ¸ÁA¢Ã¥À¤ ¸ÁzsÀ£Á®AiÀÄzÀ°è «±Àé »AzÀÄ ¥ÀjµÀvï ¥ÁægÀA¨sÀUÉÆArvÀÄ. »AzÀÆ zsÀªÀÄð-¸ÀA¸ÀÌøw-±ÀæzÁÞPÉÃAzÀæ-£ÀA©PÉUÀ¼À ªÉÄÃ¯É £ÀqÉAiÀÄĪÀ C£ÁZÁgÀUÀ¼À «gÀÄzÀÞ ¤gÀAvÀgÀ ºÉÆÃgÁl-¸ÀAWÀµÀðUÀ¼À eÉÆvÉeÉÆvÉUÉ ¸ÀªÀiÁdzÀ°è£À £ÉÆAzÀªÀjUÁV UÀt¤ÃAiÀÄ ¥ÀæªÀiÁtzÀ°è ¸ÉêÁ ZÀlĪÀnPÉUÀ¼À°è vÉÆqÀV¹PÉÆArgÀĪÀ «»A¥À E¢ÃUÀ 50zÀ ºÉƹ۰£À°èzÉ. F ¸ÀA¨sÀæªÀÄzÀ°è «»A¥À £ÀqɹzÀ ¥ÀæªÀÄÄR ZÀlĪÀnPÉUÀ¼À ªÉÄÃ¯ÉÆAzÀÄ ¨É¼ÀPÀÄ ZÉ®ÄèªÀ ¥ÀæAiÀÄvÀß.
ªÀÄgÀ½ ªÀiÁvÀÈzÀªÀÄðzÉqÉUÉ:  «»A¥À£À zÀȶÖAiÀÄ°è ¨sÁgÀvÀzÀ°ègÀĪÀªÀgÀ°è JgÀqÉà «zsÀ MAzÀÄ FUÀ »AzÀÄUÀ¼ÁVgÀĪÀªÀgÀÄ; G½zÀªÀgÀÄ »AzÉ »AzÀÄUÀ¼ÁVzÀݪÀgÀÄ ªÀÄvÀÄÛ ªÀÄÄAzÉ »AzÀÄUÀ¼ÁUÀĪÀªÀgÀÄ. »ÃUÁV 1966gÀ°è ¥ÀæAiÀiÁUÀzÀ°è «©ü£Àß zsÁ«ÄðPÀ, DzsÁåwäPÀ «ZÁgÀzsÁgÉUÀ½UÉ ¸ÉÃjzÀ ªÀÄoÁ¢üñÀgÀÄ, zsÀªÀiÁðZÁAiÀÄðgÀÄ, ¥ÀæªÀÄÄR ¸ÁzsÀÄ-¸ÀAvÀgÀÄUÀ¼À£ÀÄß ªÉÆvÀ󻃮zÀ® ¨ÁjUÉ MAzÉà ¸ÀªÀiÁ£À ªÉâPÉAiÀİè MmÁÖV ¸ÉÃj¹ §ÈºÀvï «±Àé »AzÀÄ ¸ÀªÉÄä¼À£ÀªÀ£ÀÄß £ÀqɸÀ¯Á¬ÄvÀÄ. ªÀÄvÁAvÀjvÀgÀÀ£ÀÄß »AzÀÄ zsÀªÀÄðPÉÌ ¥ÀÄ£ÀB ¸ÉÃj¹PÉÆ¼ÀÄîªÀ°è ±ÀvÀªÀiÁ£ÀUÀ½AzÀ EzÀÝ ¤µÉÃzsÀªÀ£ÀÄß vÉUÉzÀĺÁPÀĪÀ LwºÁ¹PÀ ¤tðAiÀĪÀ£ÀÄß C°è CªÀgÉ®ègÀÆ MPÉÆÌÃgÀ°¤AzÀ CAVÃPÀj¹zÀgÀÄ. F PÁAiÀÄð¸ÀgÀt EA¢UÀÆ ªÀÄÄAzÀĪÀj¢zÀÄÝ, «¥ÀvÁÌ®zÀ°è C£Áå£Àå PÁgÀtUÀ½AzÀ £ÀªÀÄä£ÀÄß vÉÆgÉzÀÄ zÀÆgÀºÉÆÃVgÀĪÀªÀgÀ£ÀÄß ªÀÄgÀ½ ªÀiÁvÀÈzsÀªÀÄðPÉÌ vÀgÀĪÀ ¥ÀæAiÀÄvÀß ¤gÀAvÀgÀªÁV £ÀqÉAiÀÄÄwÛzÉ. FªÀgÉUÉ ¸ÀĪÀiÁgÀÄ 80 ®PÀëPÀÆÌ ªÀÄA¢ C£ÀåªÀÄwAiÀÄgÀÄ ªÀÄgÀ½ »AzÀÄUÀ¼ÁV ¥ÀgÁªÀvÀð£ÉUÉÆArzÁÝgÉ.
ªÀÄvÁAvÀgÀ vÀqÉ: 
ªÀÄĹèA ªÀÄvÀÄÛ PÉʸÀÛ ªÀÄwÃAiÀÄgÀÄ £ÀqɸÀÄwÛgÀĪÀ ªÀÄvÁAvÀgÀ ZÀlĪÀnPÉUÀ½AzÀ »AzÀÄ d£À¸ÀASÉå PÀÄUÀÄÎwÛgÀĪÀÅzÀÄ ªÀiÁvÀæªÀ®èzÉà zÉñÀzÀ ¨sÀzÀævÉ-¸ÀªÀÄUÀævÉUÀ½UÉ UÀAqÁAvÀgÀPÁjAiÀiÁVzÉ. EzÀ£ÀÄß vÀqÉUÀlÄÖªÀ ¸À®ÄªÁV »AzÀÆ d£ÀeÁUÀÈwUÁV zÉñÀzÁzÀåAvÀ «»A.¥À. ªÀw¬ÄAzÀ §ÈºÀvï ¸ÀªÀiÁeÉÆÃvÀìªÀUÀ¼À£ÀÄß £ÀqɸÀ¯Á¬ÄvÀÄ. ¥ÀjuÁªÀĪÁV EAzÀÄ »AzÀÄUÀ¼À°è eÁUÀÈw ªÀÄÆqÀÄwÛzÀÄÝ, CPÀæªÀÄ ªÀÄvÀÄÛ C¤ÃwAiÀÄÄvÀªÁV £ÀqÉAiÀÄÄwÛgÀĪÀ ªÀÄvÁAvÀgÀ ZÀlĪÀnPÉUÀ¼À£ÀÄß ¤µÉâü¸À¨ÉÃPÀÄ; «zÉò PÉæöʸÀÛ «ÄµÀ£ÀjUÀ¼À£ÀÄß UÀr¥ÁgÀÄ ªÀiÁqÀ¨ÉÃPÀÄ ºÁUÀÆ ªÀÄÄRªÁqÀ zsÀj¹gÀĪÀ F ªÀÄvÁAvÀgÀPÁj ¸ÀA¸ÉÜUÀ½UÉ ºÀjzÀħgÀÄwÛgÀĪÀ «zÉò ºÀtªÀ£ÀÄß ¥Àæw§A¢ü¸À¨ÉÃPÀÄ J£ÀÄߪÀ ¸ÁªÀðd¤PÀ MvÀÛqÀ M®UÉÆ¼ÀÄîwÛzÉ. PÉ®ªÀµÀðUÀ¼À »AzÉ PÉÃAzÀæ UÀȺÀSÁvÉAiÀÄ ¸À¨sÉAiÀÄ°è «zÉñÀUÀ½AzÀ ºÀjzÀħgÀÄwÛgÀĪÀ ºÀtzÀ ºÉƼÉUÉ vÀqɺÁPÀĪÀ ±Á¸À£À gÀa¸À¨ÉÃPÉAzÀÄ ªÀÄĹèA °ÃUï MAzÀ£ÀÄß½zÀÄ G½zÉ®è gÁdQÃAiÀÄ ¥ÀPÀÕUÀ¼ÀÄ MvÁ۬ĹzÀÄÝ, F PÀÄjvÀ d£ÀeÁUÀÈwAiÀÄ ±ÀĨsÀ®PÀët.
¸ÁªÀÄgÀ¸ÀåzÉqÉUÉ ¢lÖ ºÉeÉÓ
»AzÀÆ ¸ÀªÀiÁdzÀ ªÀĺÁ ¦qÀÄUÀÄUÀ¼À°è MAzÁzÀ ªÉÄîÄ-QüÀÄ ¸Ààø±Àð-C¸Ààø±Àå ªÀÄÄAvÁzÀ DZÀgÀuÉUÀ¼À£ÀÄß ºÉÆÃUÀ¯Ár¸ÀĪÀ ¥ÀæAiÀÄvÀߪÁV,
§  ««zsÀ eÁw-ªÀÄvÀ-¸ÀªÀÄÄzÁAiÀÄUÀ½UÉ ¸ÉÃjzÀ ¸ÁzsÀÄ-¸ÀAvÀgÀ£ÀÄß MAzÉà ªÉâPÉAiÀİè vÀgÀĪÀ ¥ÀæAiÀÄvÀß £ÀqɬÄvÀÄ. EzÀgÀ ¥sÀ®ªÁV GqÀĦAiÀİè 1969gÀ°è £ÀqÉzÀ »AzÀÆ ¸ÀªÉÄäüÀ£ÀzÀ°è £ÀÆgÁgÀÄ ¸Áé«ÄÃfUÀ¼ÀÄ MAzÉà ªÉâPÉAiÀİè PÀĽvÀÄ “»AzÀªÀB ¸ÉÆÃzÀgÁB ¸ÀªÉÃðB | £À »AzÀÄB ¥ÀwvÉÆÃ ¨sÀªÉÃvïB || (»AzÀÄUÀ¼É®è ¸ÀºÉÆÃzÀgÀgÀÄ; AiÀiÁªÀ »AzÀĪÀÇ QüÀ®è) JAzÀÄ KPÀPÀAoÀ¢AzÀ ¸ÁjzÀgÀÄ. ªÀiÁvÀæªÀ®èzÉà zÉñÀzÁzÀåAvÀ¢AzÀ DUÀ«Ä¹zÀ ¥Àæw¤¢üUÀ¼À ªÀåªÀ¸ÉÜUÉ GqÀĦAiÀÄ ªÀģɪÀÄ£ÉUÀ¼À£ÀÆß vÉgÉzÀÄ ¸ÁéUÀw¹zÀÄÝ LwºÁ¹PÀ WÀl£ÉUÀ¼À¯ÉÆèAzÀÄ.
§  zÉñÀzɯÉèqÉAiÀÄ ¸ÀĪÀiÁgÀÄ 50 ¸Á«gÀPÀÆÌ C¢üPÀ ªÀÄA¢ ¥Àæw¤¢üUÀ¼ÀÄ ¸ÉÃjzÀÝ 1983gÀ°è zsÀªÀÄð¸ÀܼÀzÀ §½AiÀÄ GfgÉAiÀÄ°è £ÀqÉzÀ «.»A.¥À.£À 2£Éà ¥ÁæAwÃAiÀÄ ¸ÀªÉÄäüÀ£ÀzÀ°è GqÀĦAiÀÄ ¥ÉÃeÁªÀgÀzÀ «±ÉéñÀégÀwÃxÀð ²æÃUÀ¼ÀÄ “ªÀĪÀÄ ¢ÃPÁë »AzÀÄ gÀPÁë” (»AzÀÄUÀ¼À gÀPÀëuÉ £À£Àß ¢ÃPÉë) ªÀÄvÀÄÛ “ªÀĪÀÄ ªÀÄAvÀæ ¸ÀªÀiÁ£ÀvÁ” (¸ÀªÀiÁ£ÀvÉAiÉÄà £À£Àß fêÀ£ÀzÀ ªÀÄAvÀæ) JA§ JgÀqÀÄ ºÉƸÀ ªÀÄAvÀæUÀ¼À£ÀÄß »AzÀÄ ¸ÀªÀiÁdPÉÌ ¤ÃrzÀgÀÄ.
§  EzÀgÀ ªÀÄÄAzÀĪÀjzÀ ¨sÁUÀªÁV ¥ÉÃeÁªÀgÀ ²æÃUÀ¼ÀÆ ¸ÉÃjzÀAvÉ C£ÉÃPÀ ªÀÄoÁ¢üñÀgÀÄ ¸ÀªÀiÁdzÀ »AzÀĽzÀ ªÀUÀðUÀ¼À PÉÃjUÀ½UÉ, NtÂUÀ½UÉ ¨sÉÃn ¤Ãr ¸ÀºÉÆÃzÀgÀvÉAiÀÄ ¸ÀAzÉñÀ ¸ÁjzÁÝgÉ. EzÀÄ ªÀĺÀvÀÛ÷ézÀ ¥ÀjuÁªÀÄ ©ÃjgÀĪÀÅzÀ£ÀÄß EAzÀÄ PÁt§ºÀÄzÁVzÉ.
§  PÀuÁðªÀwAiÀÄ°è £ÀqÉzÀ «»¥ÀA£À ºÀvÀÛ£Éà C¢üªÉñÀ£ÀzÀ°è ¥Á¯ÉÆÎArzÀÝ 700PÀÆÌ C¢üPÀ ¸ÀAvÀgÀÄ £ÀUÀgÀzÀ ªÀAavÀ§¹ÛAiÀİègÀĪÀ ªÀģɪÀÄ£ÉUÉ ¨sÉÃn ¤Ãr, CªÀgÉÆA¢UÉ PÀÆr DºÁgÀ ¹éÃPÀj¹zÀgÀÄ.
   EAvÀºÀ C£ÉÃPÀ ¸ÀA§AzsÀ ¸ÀÄzsÁgÀuÉAiÀÄ; ªÀiÁ£À¹PÀ PÀAzÀgÀ ¤ªÁgÀuÉAiÀÄ ZÀlĪÀnPÉUÀ¼À£ÀÄß «»A¥À ¤gÀAvÀgÀªÁV £ÀqɹPÉÆAqÀÄ §gÀÄwÛzÉ.
UÉÆÃ¸ÀAgÀPÀëuÉUÉ PÀAPÀt :
·        »AzÀÄUÀ¼À ¥ÀÆdå UÉÆÃªÀiÁvÉAiÀÄ gÀPÀëuÉUÁV zÉñÀzÀ ºÀ½îºÀ½îUÀ¼À°è §dgÀAUÀzÀ¼À ¸ÉÃjzÀAvÉ UÉÆÃ¥ÉæÃ«Ä ¸ÀAWÀl£ÉUÀ¼ÀÄ «.»A.¥À.£À ªÀiÁUÀðzÀ±Àð£ÀzÀ°è PÁAiÀÄð¤gÀvÀªÁVªÉ. zÉñÀzÀ°è ¸ÀA¥ÀÆtðªÁV UÉÆÃºÀvÉå ¤µÉÃzsÀPÉÌ DUÀ滹 ««zsÀ ªÀÄoÁ¢üñÀgÀÄ, ¸ÁzsÀÄ-¸ÀAvÀgÀ £ÉÃvÀÈvÀézÀ°è zÉñÀªÁå¦ 108 ¢£ÀUÀ¼À PÁ® (2009gÀ ¸É. 30gÀAzÀÄ PÀÄgÀÄPÉëÃvÀæ¢AzÀ DgÀA¨sÀUÉÆAqÀÄ 2010gÀ d£ÀªÀj 17gÀAzÀÄ £ÁUÀ¥ÀÄgÀzÀ°è ¸ÀªÀiÁgÉÆÃ¥À) «±ÀéªÀÄAUÀ® UÉÆÃ UÁæªÀÄ AiÀiÁvÉæAiÀÄ£ÀÄß £ÀqɸÀ¯Á¬ÄvÀÄ. ºÀ½îºÀ½îUÉ vÉgÀ½zÀ AiÀiÁvÉæAiÀÄÄ d£ÀgÀ°è UÉÆÃ«£À ªÀĺÀvÀézÀ §UÉUÉ eÁUÀÈw ªÀÄÆr¹ UÉÆÃºÀvÉå ¤µÉâü¸ÀĪÀAvÉ DUÀ滹 ¸ÀAUÀ滹zÀ MlÄÖ 8 PÉÆÃn ¸À»¸ÀAUÀæºÀªÀ£ÀÄß »AzÀÄ, ªÀÄĹèA, PÉæöʸÀÛ, ¨ËzÀÞ zsÀªÀÄðUÀ¼À ªÀÄÄRAqÀgÀÄUÀ¼À ¸ÀªÀÄÄäRzÀ°è gÁµÀÖç¥Àw ¥Àæw¨sÁ ¥Ánïï CªÀjUÉ ¸À°è¸À¯Á¬ÄvÀÄ. UÉÆÃªÀ£ÀÄß zÉñÀzÀ gÁ¶ÖçÃAiÀÄ ¥ÁætÂAiÀiÁV WÉÆÃ¶¸ÀĪÀAvÉ, gÉÊvÀgÀ ¹ÜwUÀw ¸ÀÄzsÁj¸ÀĪÀ ¢QÌ£À°è zÉñÀzÀ ¥ÀæwAiÉÆAzÀÄ gÁdåzÀ®Æè PÁªÀÄzsÉãÀÄ «±Àé«zÁå®AiÀÄ ¸Áܦ¸ÀĪÀAvÉ ºÁUÀÆ ¨sÁgÀwÃAiÀÄ UÉÆÃvÀ½UÀ¼À£ÀÄß ¸ÀAgÀQë¸À®Ä PÉÃAzÀæ ¸ÀgÀPÁgÀ ¥ÀævÉåÃPÀ ¸ÀaªÁ®AiÀĪÀ£ÀÄß ¸Áܦ¸ÀĪÀAvÉ gÁµÀÖç¥ÀwUÀ½UÉ ªÀÄ£À« ªÀiÁqÀ¯Á¬ÄvÀÄ.
±ÀæzÁÞPÉÃAzÀæUÀ¼À gÀPÀëuÉ:
·        CªÀÄgÀ£ÁxÀ AiÀiÁvÉæUÉ ¸ÀÆPÀÛ ¸ËPÀAiÀÄð MzÀV¸ÀĪÀÅzÀÆ, wgÀÄ¥ÀwAiÀÄ°è £ÀqÉAiÀÄÄwÛzÀÝ PÉæöʸÀÛ «ÄµÀ£ÀjUÀ¼À ZÀlĪÀnPÉAiÀÄ «gÀÄzÀÞ £ÀqÉzÀ ‘wgÀÄ¥Àw G½¹’ ºÉÆÃgÁl, »AzÀÆUÀ¼À ±ÀæzÁÞPÉÃAzÀæªÁzÀ CAiÉÆÃzsÁå gÁªÀÄd£Àä¨sÀÆ«ÄAiÀÄ°è ºÉÆÃgÁl, zÉñÀzÀ ¸ÀÄgÀPÀëvÉAiÀÄ zÀȶ֬ÄAzÀ ¸ÀÆPÀëöäªÀÇ, AiÀÄÆgÉäAiÀÄA£ÀAvÀºÀ ¸ÀA¥À£ÀÆä®UÀ¼À PÀtdªÀÇ »AzÀÆUÀ¼À ±ÀæzÁÞPÉÃAzÀæªÀÇ DzÀ gÁªÀĸÉÃvÀÄ«£À £Á±À ¸ÉÃjzÀAvÉ »AzÀÆ zsÁ«ÄðPÀ-¸ÁA¸ÀÌøwPÀ PÀÄgÀĺÀÄUÀ¼À ªÉÄÃ¯É £ÀqÉAiÀÄÄwÛgÀĪÀ ¤gÀAvÀgÀ zÁ½AiÀÄ «gÀÄzÀÝ ºÉÆÃgÁl £Àqɹ CªÀÅUÀ¼À£ÀÄß G½¹, ¸ÀAgÀQë¸ÀĪÀAvÉ ªÀiÁqÀĪÀ°è «±Àé »AzÀÄ ¥ÀjµÀvï ¸ÀzÁ ªÀÄÄAzÁ¼ÀvÀé ªÀ»¹zÉ.
¸ÁªÀiÁfPÀ UÀtågÀ ¸ÀägÀuÉ
·        §¸ÀªÀtÚ£ÀAvÉAiÉÄà ¸ÀªÀiÁdzÀ zÉÆÃµÀUÀ¼À£ÀÄß PÀlĪÁV nÃQ¹, CªÀÅUÀ¼À£ÀÄß ¸Àj¥Àr¸À®Ä ±Àæ«Ä¹zÀ ¸ÀªÀiÁd ¸ÀÄzsÁgÀPÀgÀÆ ªÁUÉÎÃAiÀÄPÁgÀgÀÆ DzÀ PÀ£ÀPÀzÁ¸ÀgÀ DgÁzsÀåzÉêÀ D¢PÉñÀªÀ£À PÉëÃvÀæzÀ°è PÀ£ÀPÀzÁ¸ÀgÀ ¥ÀÄtå¸ÀäøwAiÀÄ UËgÀªÁxÀÀð ¸ÀAVÃvÀ-UÀªÀÄPÀ GvÀìªÀªÀ£ÀÄß DZÀj¸À¯Á¬ÄvÀÄ. vÀ«Ä¼ÀÄ£Ár£À ªÁUÉÎÃAiÀÄPÁgÀ vÁåUÀgÁdgÀ ºÀÄlÆÖgÀÄ wgÀĪÉÊAiÀÄÆj£À°è ¥ÀæwªÀµÀð CªÀgÀ d£À䢣ÀzÀAzÀÄ zÀQët¨sÁgÀvÀzÀ ¸ÀAVÃvÀ ¢UÀÎdgÉ®è MAzÀÄUÀÆr vÁåUÀgÁdgÀ DgÁzÀ£Á GvÀìªÀ £ÀqɸÀĪÀAvÉAiÉÄà PÀ£ÀPÀzÁ¸À dAiÀÄAwAiÀÄ£ÀÄß EA¢UÀÆ DZÀj¸À¯ÁUÀÄwÛzÉ. PÀ£ÀPÀzÁ¸ÀgÀ ¸ÀªÀÄÄzÁAiÀĪÀÇ ¸ÉÃjzÀAvÉ ¸ÀªÀiÁd-¸ÀgÀPÁgÀzÀ J¯ÉèÃqÉAiÀÄÆ «¸ÀägÀuÉUÉÆ¼ÀUÁVzÀÝ PÀ£ÀPÀzÁ¸ÀgÀ ¸ÀägÀuÉ ¸À£ÀqɹzÀ F ¥ÀæAiÀÄvÀßzÀ ¥sÀ®ªÁV EAzÀÄ PÀ£ÁðlPÀ ¸ÀgÀPÁgÀ PÁV£É¯É C©üªÀÈ¢ÞUÁV MAzÀÄ ªÀÄAqÀ°AiÀÄ£ÀÄß gÀa¹, PÉëÃvÀæzÀ ¥ÀÄgÉÆÃ©üªÀÈ¢ÞUÉ ªÀÄÄAzÁVzÉ. EµÀÄÖ ªÀiÁvÀæªÀ®èzÉà ¸ÀgÀPÁj gÀeÉAiÀÄ£ÀÆß WÉÆÃ¶¹zÉ. EAvÀºÀ ºÀ®ªÁgÀÄ £ÁqÀÄ-£ÀÄqÀÄ-¸ÀA¸ÀÌøwAiÀÄ ±ÉæÃAiÀĹìUÁV §zÀÄQzÀ C£ÉÃPÀ CeÁÕvÀgÀ£ÀÄß ¸ÀªÀiÁdzÀ ªÀÄÄ£É߯ÉUÉ vÀgÀ®Ä ¤gÀAvÀgÀ PÁAiÀÄð²Ã®ªÁVzÉ.
zsÁ«ÄðPÀ eÁUÀÈw
·        zsÁ«ÄðPÀ eÁUÀÈwUÁV zÉñÀzÁzÀåAvÀ ¤gÀAvÀgÀ zsÁ«ÄðPÀ PÀ¯Á¥ÀUÀ¼ÀÄ, zsÁ«ÄðPÀ ºÁUÀÆ gÁ¶ÖçÃAiÀÄ ªÀĺÁ¥ÀÄgÀĵÀgÀ §UÉUÉ ºÀjPÀxÉUÀ¼ÀÄ, ¸ÁzsÀĸÀAvÀgÀ ¥ÀæªÀZÀ£ÀUÀ¼ÀÄ, gÁªÀiÁAiÀÄt ªÀÄAqÀ½UÀ¼À ¸ÁÜ¥À£É, gÁªÀiÁAiÀÄtzÀ ªÉÄÃ¯É G¥À£Áå¸ÀUÀ¼ÀÄ, gÁªÀÄ£ÀªÀ«Ä, PÀȵÁÚµÀÖ«Ä ªÀÄÄAvÁzÀ ºÀ§âUÀ¼À DZÀgÀuÉ, AiÀÄĪÀd£ÀvÉUÉ ¨sÁgÀwÃAiÀÄ ¸ÀA¸ÀÌøwAiÀÄ ¥ÀjZÀAiÀÄ ªÀiÁrPÉÆqÀĪÀ ¥ÀæAiÀÄvÀߪÁV ªÀÄPÀ̽UÉ gÁªÀiÁAiÀÄt ªÀÄvÀÄÛ ªÀĺÁ¨sÁgÀvÀ ¥ÀjÃPÁë PÁAiÀÄðPÀæªÀÄ(8jAzÀ 10£Éà vÀgÀUÀwªÀgÉV£À «zÁåyðUÀ½UÁV £ÀqÉAiÀÄĪÀ F ¥ÀjÃPÉëAiÀİè FªÀgÉUÉ PÀ£ÁðlPÀzÀ ¸ÀĪÀiÁgÀÄ 12 ®PÀëPÀÆÌ C¢üPÀ «zÁåyðUÀ¼ÀÄ ¨sÁUÀªÀ»¹zÁÝgÉ.)
d£ÀvÁ d£ÁzsÀð£À£À ¸ÉêÉAiÀİè
   ªÀ£ÀªÁ¹UÀ¼ÀÄ ºÁUÀÆ ±Á¯ÉUÀ½UÁV ºÀvÁÛgÀÄ ªÉÄʰUÀ¼ÀµÀÄÖ zÀÆgÀ ºÉÆÃUÀ¨ÉÃPÁzÀAvÀºÀ PÀqÉUÀ¼À°è£À«zÁåyðUÀ½UÉ £ÉgÀªÁUÀĪÀ GzÉÝñÀ¢AzÀ «.»A.¥À. zÉñÀzÁzÀåAvÀ ¸ÀĪÀiÁgÀÄ 27 ¸Á«gÀ KPÀ® «zÁå®AiÀÄUÀ¼À£ÀÄß £ÀqɸÀÄwÛzÉ. M§â ²PÀëPÀgÀ£ÀÄß ºÉÆA¢gÀĪÀ F ±Á¯ÉUÀ¼À°è ¸ÀĪÀiÁgÀÄ 8 ®PÀë ªÀÄA¢ ªÀÄPÀ̼ÀÄ «zÁå¨sÁå¸À ªÀiÁqÀÄwÛzÁÝgÉ. PÉêÀ® ²PÀët ªÀiÁvÀæªÀ®èzÉà F KPÀ®«zÁå®AiÀÄUÀ¼À ¸ÀÄvÀÛªÀÄÄvÀÛ°£À ¥ÀæzÉñÀUÀ¼À°è UÁæªÀÄ «PÁ¸À ¸À«ÄwUÀ¼ÀÆ, DgÉÆÃUÀå PÉÃAzÀæUÀ¼ÀÄ PÁAiÀÄð¤ªÀð»¸ÀÄwÛªÉ.
·  PÉêÀ® ¸ÀPÁðgÀ ªÀiÁqÀ§ºÀÄzÁzÀ PÉ®¸ÀUÀ¼À£ÀÆß «.»A.¥À. £À ¸ÁzsÀĸÀAvÀgÀÄ ªÀiÁqÀÄwÛzÁÝgÉ. ¥ÀÄlªÀwðAiÀÄ ¸Á¬Ä¨Á¨Á DAzsÀæ¥ÀæzÉñÀzÀ C£ÀAvÀ¥ÀÄgÀ f¯ÉèAiÀÄ 700 ºÀ½îUÀ½UÉ GavÀªÁV PÀÄrAiÀÄĪÀ ¤Ãj£À ªÀåªÀ¸ÉÜ, zsÀªÀÄð¸ÀܼÀ UÁæªÀiÁ©üªÀÈ¢Þ AiÉÆÃd£ÉAiÀÄ ªÀÄÆ®PÀ ªÀÄ»¼Á ¸ÁéªÀ®A§£É, ¸Á«gÀPÀÆÌ C¢üPÀ UÁæªÀÄUÀ¼À°è ¥Àj¸ÀgÀ ¸ÀAgÀPÀëuÉUÉ ºÀ®ªÁgÀÄ AiÀıÀ¹éà ¥ÀæAiÉÆÃUÀ, ªÀiÁvÁ CªÀÄÈvÁ£ÀAzÀªÀĬÄà AiÀĪÀgÀÄ PÉÆaÑAiÀÄ°è £ÀqɸÀÄwgÀĪÀ ªÀİָÉàµÁ°n D¸ÀàvÉæAiÀİè 48 ¸Á«gÀ gÉÆÃVUÀ¼ÀÄ ¥ÀæwªÀµÀð aQvÉì, ²æÃ gÀ«±ÀAPÀgï UÀÄgÀÆf, ¨Á¨Á gÁªÀÄzÉÃªï ¸ÉÃjzÀAvÉ zÉñÀzÀ ¸Á«gÁgÀÄ ªÀÄA¢ ¸ÁzsÀÄ-¸ÀAvÀgÀÄ ¸ÉêÁZÀlĪÀnPÉUÀ¼À°è vÀªÀÄä£ÀÄß vÉÆqÀV¹PÉÆArzÁÝgÉ.
·      zÉñÀzÀ MAzÀÄ ¨sÁUÀ¢AzÀ E£ÉÆßAzÀÄ ¨sÁUÀPÉÌ ¸ÀAZÀj¸ÀĪÀ, AiÀiÁvÁæyðUÀ½UÁV ºÁUÀÆ ¸ÀAPÀµÀÖzÀ°ègÀĪÀ »AzÀÄUÀ½UÉ ¸À®ºÉ-¸ÀºÀPÁgÀ ¤ÃqÀĪÀ ªÀĺÀvÀÛ÷ézÀ GzÉÝñÀ¢AzÀ ‘»AzÀÆ ºÉ¯ïà¯ÉÊ£ï’ ºÁUÀÆ DgÉÆÃUÀå gÀPÀëuÉAiÀÄ GzÉÝñÀ¢AzÀ zÉñÀzÀ AiÀiÁªÀÅzÉà ¨sÁUÀzÀ°ègÀĪÀ d£À¸ÁªÀiÁ£ÀåjUÉ £ÉgÀªÁUÀĪÀ GzÉÝñÀ¢AzÀ ‘EArAiÀiÁ ºÉ¯ïÛ¯ÉÊ£ï’ ¸Ë®¨sÀåUÀ¼À£ÀÄß «»A¥À gÀƦ¹zÉ. F A¸Ë®¨sÀå ¥ÁægÀA¨sÀUÉÆAqÀÄ PÉ®ªÉà wAUÀ¼ÀÄUÀ¼ÀÄ PÀ¼É¢zÀÄÝ zÉñÀzÀ ¸Á«gÁgÀÄ ªÀÄA¢ EzÀgÀ ¸Ë®¨sÀå ¥ÀqÉ¢zÁÝgÉ.
·    EwÛÃZÉUÉ «.»A.¥À. ªÀw¬ÄAzÀ ¥ÀÄuÉAiÀÄ°è ‘¤gÁªÀÄAiÀÄ’ AiÉÆÃd£ÉAiÀÄ ºÉ¸Àj£À°è ¸ÀèAUÀ¼À°è£À ªÀÄPÀ̼ÀÄ ºÁUÀÆ PÀlÖqÀ PÁ«ÄðPÀgÀ 12,025 ªÀÄPÀ̽UÉ ¸ÀAZÁj D¸ÀàvÉæAiÀÄ ªÀÄÆ®PÀ ®¹PÉ ºÁPÀ¯Á¬ÄvÀÄ. EªÀÅUÀ¼À®èzÉà ²PÀët (826), ªÉÊzÀåQÃAiÀÄ (809), ¸ÁéªÀ®A§£É (345), ¸ÁªÀiÁfPÀ (140) ºÁUÀÆ ¸ÁAzÀ©üðPÀ ¸ÀªÀiÁd¸ÉêÉUÀ¼ÀÄ (741) ¸ÉÃjzÀAvÉ MlÄÖ 2,861PÀÆÌ C¢üPÀ ¸ÉêÁ ZÀlĪÀnPÉUÀ¼À£ÀÄß «±Àé »AzÀÄ ¥ÀjµÀvï £ÀqɸÀÄwÛzÉ.
 ವಿಶ್ವ ಹಿಂದೂ ಪರಿಷತ್ ಎಂದರೆ ಹೋರಾಟ ಎನ್ನುವಂತೆ ಬಿಂಬಿಸುತ್ತಿರುವ ಮಾಧ್ಯಮವರು ವಿಹಿಂಪ್ ನಡೆಸುತ್ತಿರುವ ಸೇವಾ ಚಟುವಟಿಕೆಗಳನ್ನು ಹಾಗೂ ಸಾಮಾಜಿಕ ಕಳಹಳಿಯ ಹಿಂದೂ ಹೆಲ್ಪ್ ಲೈನ್ , ಇಂಡಿಯಾ ಹೆಲ್ತ್ ಲೈನ್ ಗಳ ಸೇವೆಯನ್ನು ತೆರೆದ ಕಣ್ಣಿನಿಂದ ನೋಡಲಿ.